ದಾರಂದಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಸೇವಾ ನಿವೃತ್ತಿ ಹೊಂದಿದ ಕೃಷ್ಣನಗರ ಅಂಗನವಾಡಿ ಕೇಂದ್ರದ ಕಾರ್‍ಯಕರ್ತೆ ಸೀತಾರತ್ನ ಹಾಗು ಅಜೇಯನಗರ ಅಂಗನವಾಡಿ ಕೇಂದ್ರದ ಕಾರ್‍ಯಕರ್ತೆ ಶಶಿಕಲಾರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಕೋಡಿಂಬಾಡಿ ವಲಯದ ಅಂಗನವಾಡಿ ಕಾರ್‍ಯಕರ್ತೆಯರ ಹಾಗು ಸಹಾಯಕಿಯರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಾರಂದಕುಕ್ಕು ಅಂಗನವಾಡಿ ಕಾರ್‍ಯಕರ್ತೆ ಕೇಂದ್ರದ ಕಾರ್ಯಕರ್ತೆ ವೇದಾವತಿ ಎನ್. ಶೆಟ್ಟಿ ಸ್ವಾಗತಿಸಿದರು. ಕು.ರಶ್ಮಿಕಾ ಕಾರ್ಯಕ್ರಮ ನಿರೂಪಿಸಿದರು. ಕೋಡಿಂಬಾಡಿ ಅಂಗನವಾಡಿ ಕೇಂದ್ರದ ಕಾರ್‍ಯಕರ್ತೆ ಸುಮಲತಾ ಅಧ್ಯಕ್ಷತೆ ವಹಿಸಿದ್ದರು. ಕೋಡಿಂಬಾಡಿ ವಲಯದ ಮೇಲ್ವಿಚಾರಕಿ ಹರಿಣಾಕ್ಷಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರು, ದಾರಂದಕುಕ್ಕು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಧನ್ಯ ಹಾಗು ವಲಯದ ಎಲ್ಲಾ ಅಂಗನವಾಡಿಗಳ ಕಾರ್‍ಯಕರ್ತೆಯರು ಹಾಗು ಸಹಾಯಕಿಯರು ಭಾಗವಹಿಸಿದ್ದರು. ಬೀರಿಗ ಕೇಂದ್ರದ ಕಾರ್‍ಯಕರ್ತೆ ಕು.ಅರುಣಾ ಪ್ರಸ್ತಾವಿಕವಾಗಿ ಮಾತನಾಡಿದರು. ಸೇವಾ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್‍ಯಕರ್ತೆಯರು ತಮ್ಮ ಅನುಭವ ಹೇಳಿಕೊಂಡರು. ಬನ್ನೂರು ಕಟ್ಟೆ ಅಂಗನವಾಡಿ ಕೇಂದ್ರದ ಕಾರ್‍ಯಕರ್ತೆ ವನಿತಾ ಅನಿಸಿಕೆ ಹೇಳಿದರು. ಜಿಡೆಕಲ್ಲು ಕೇಂದ್ರದ ಕಾರ್‍ಯಕರ್ತೆ ಲೀನಾ ವಂದಿಸಿದರು.

LEAVE A REPLY

Please enter your comment!
Please enter your name here