ಉಪ್ಪಿನಂಗಡಿ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಆಯ್ಕೆ

0

ಉಪ್ಪಿನಂಗಡಿ: ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಉಪ್ಪಿನಂಗಡಿ ಇದರ ಅಧ್ಯಕ್ಷರಾಗಿ ಉದಯ ಅತ್ರಮಜಲು, ಕಾರ‍್ಯದರ್ಶಿಯಾಗಿ ರೋಹಿಣಿ ಹರೀಶ್ ಪಟ್ಲ, ಕೋಶಾಧಿಕಾರಿಯಾಗಿ ಪದ್ಮಾವತಿ ಚೆನ್ನಪ್ಪ ಗೌಡ ರಂಗಾಜೆ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬೊಳ್ಳಾವು, ಜೊತೆ ಕಾರ‍್ಯದರ್ಶಿಯಾಗಿ ಹರಿಣಿ ಗಿರೀಶ್ ಪಿ.ಎಂ. ಗುರ್ಜಿ ಆಯ್ಕೆಯಾಗಿದ್ದಾರೆ.

ಉಪ್ಪಿನಂಗಡಿಯ ನೆಡ್ಚಿಲು ಬಾಬು ಗೌಡರ ಮನೆಯಲ್ಲಿ ಸ್ವಸಹಾಯ ಸಂಘದ ಸದಸ್ಯರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಮೇಲ್ವಿಚಾರಕಿ ಸುಮಲತಾ ಒಕ್ಕೂಟ ಹಾಗೂ ತ್ರೈಮಾಸಿಕ ಸಭೆಯ ಮಾಹಿತಿ ನೀಡಿದರು. ಪ್ರೇರಕ ತಾರನಾಥ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here