ಪಂಚಾಯತ್ ರಾಜ್ ಇಂಜಿನಿಯರ್ ಬರುವುದು ಯಾರಿಗೂ ಗೊತ್ತಾಗುವುದಿಲ್ಲ – ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಆರೋಪ

0

ಪಾಣಾಜೆ: ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ರವರು ಪಾಣಾಜೆ ಗ್ರಾಮ ಪಂಚಾಯತ್ ಗೆ ಬರುತ್ತಿಲ್ಲ. ಬಂದರೂ ಪಿಡಿಒ, ಅಧ್ಯಕ್ಷರಿಗೆ ಗೊತ್ತಾಗುವುದಿಲ್ಲ. ಇದು ಗಂಭೀರ ಸಮಸ್ಯೆಯಾಗಿದೆ ಎಂದು ಪಂಚಾಯತ್ ಸದಸ್ಯರು ಆರೋಪಿಸಿದರು.

ಪಾಣಾಜೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಆರೋಪ ವ್ಯಕ್ತವಾಗಿದೆ. ಇಲಾಖೆಗೆ ಸಂಬಂಧಿಸಿದ ಯಾವುದೇ ವಿಚಾರಗಳೂ ನಮಗೆ ತಿಳಿಯುತ್ತಿಲ್ಲ. ಇಂಜಿನಿಯರ್ ರವರು ಪಂಚಾಯತ್ ಗೇಟ್ ನವರೆಗೆ ಬಂದರೂ ಒಳಗೆ ಬರುವುದಿಲ್ಲ. ಪಿಡಿಒರವರೊಡನೆ ಬಂದು ಮಾತನಾಡುತ್ತಿಲ್ಲ. ಅಧ್ಯಕ್ಷರಿಗೂ ಬರುವ ವಿಚಾರ ತಿಳಿಯದ ಪರಿಣಾಮ ಅಭಿವೃದ್ಧಿ ಕ್ರಮ ಕೈಗೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಸದಸ್ಯೆ ಮೈಮುನತ್ತುಲ್ ಮೆಹ್ರಾ ಆರೋಪಿಸಿದ್ದಾರೆ.

ಸಭೆಯು ಪಂಚಾಯತ್ ಅಧ್ಯಕ್ಷೆ ಭಾರತೀ ಭಟ್ ರವರ ಅಧ್ಯಕ್ಷತೆಯಲ್ಲಿ ಸೆ. 21 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಉಪಾಧ್ಯಕ್ಷ ಅಬೂಬಕ್ಕರ್ ಇಬ್ರಾಹಿಂ, ಸದಸ್ಯರಾದ ಮೈಮುನತ್ತುಲ್ ಮೆಹ್ರಾ, ವಿಮಲ, ಜಯಶ್ರೀ, ಸುಲೋಚನಾ, ಮೋಹನ ನಾಯ್ಕ್, ನಾರಾಯಣ ನಾಯಕ್, ಕೃಷ್ಣಪ್ಪ ಪೂಜಾರಿ, ಸುಭಾಸ್ ರೈ, ಪಿಡಿಒ ಚಂದ್ರಮತಿ, ಕಾರ್ಯದರ್ಶಿ ಆಶಾ ಹಾಜರಿದ್ದರು.

LEAVE A REPLY

Please enter your comment!
Please enter your name here