ಕಡಬ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

0

  • ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ದ್ವಿತೀಯ

ಕಡಬ: ರೆಂಜಿಲಾಡಿ ಗ್ರಾಮದ ಸಾಂಥೋಮ್ ವಿದ್ಯಾನಿಕೇತನ ಸಂಸ್ಥೆಯಲ್ಲಿ ಸೆ.೨೦ರಂದು ಜರಗಿದ ಕಡಬ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಭರತನಾಟ್ಯದಲ್ಲಿ ಪ್ರಣಮ್ಯ ಪಿ ರಾವ್ (೧೦ನೇ ತರಗತಿ) ಪ್ರಥಮ ಸ್ಥಾನ, ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ರಿದ್ದಿ ಶೆಟ್ಟಿ( ೯ನೇ ತರಗತಿ) ಪ್ರಥಮ ಸ್ಥಾನ, ಜನಪದ ನೃತ್ಯದಲ್ಲಿ ಪ್ರಣಮ್ಯ ಪಿ ರಾವ್ ಮತ್ತು ತಂಡದವರು ಪ್ರಥಮ ಸ್ಥಾನ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಕೃಷ್ಣ ಕಾರ್ತಿಕ ಯು. (ಒಂಬತ್ತನೇ ತರಗತಿ) ದ್ವಿತೀಯ ಸ್ಥಾನ, ಛದ್ಮ ವೇಷದಲ್ಲಿ ಅಭೀಷ್ಠ ಕೆದ್ಲಾಯ (ಎಂಟನೇ ತರಗತಿ)ದ್ವಿತೀಯ ಸ್ಥಾನ, ಮಿಮಿಕ್ರಿಯಲ್ಲಿ ಜೋಯಲ್ ಪಿ ಎಂ.( ಎಂಟನೇ ತರಗತಿ) ದ್ವಿತೀಯ ಸ್ಥಾನ, ಕವ್ವಾಲಿಯಲ್ಲಿ ನವಾಜ್ ಮತ್ತು ತಂಡದವರು ದ್ವಿತೀಯ ಸ್ಥಾನ, ಚಿತ್ರಕಲೆಯಲ್ಲಿ ಧೃತಿ ಎಸ್ ಎಂ. (೧೦ನೇ ತರಗತಿ) ತೃತೀಯ ಸ್ಥಾನ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ಹೃದ್ಯಾಕೆ (೯ನೇ ತರಗತಿ) ತೃತೀಯ ಸ್ಥಾನ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿಜ್ಞಾ ಬಿ.ಎಂ. (೯ನೇ ತರಗತಿ) ತೃತಿಯ ಸ್ಥಾನವನ್ನು ಪಡೆದಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here