ವಲಯ ಮಟ್ಟದ ಪ್ರತಿಭಾ ಕಾರಂಜಿ : ಉಪ್ಪಿನಂಗಡಿ ಶ್ರೀರಾಮ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಪುತ್ತೂರು : ಉಪ್ಪಿನಂಗಡಿ ಮಠ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಶಾಲೆ ಹಿರಿಯ ಮತ್ತು ಕಿರಿಯ ಎರಡು ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಹಿರಿಯರ ವಿಭಾಗ ದ್ವಿತೀಯ ಸಮಗ್ರ ಪ್ರಶಸ್ತಿ : ಧಾರ್ಮಿಕ ಪಠಣ ಪ್ರಥಮ ಮೋಕ್ಷಾ ಕೆ (7ನೇ), ಕನ್ನಡ ಕಂಠಪಾಠ ಪ್ರಥಮ ಮಧುಶ್ರೀ(7ನೇ), ಲಘುಸಂಗೀತ ಪ್ರಥಮ ರಿಷಿಕಾ(6ನೇ), ಕಥೆ ಹೇಳುವುದು ಪ್ರಥಮ ಅಂಶಿಕಾ(6ನೇ), ಛದ್ಮವೇಷ ದ್ವಿತೀಯ ಪ್ರಜ್ಞಾ ಕೆ.(7ನೇ), ಹಿಂದಿ ಕಂಠಪಾಠ ದ್ವಿತೀಯ ತುಷಾರ್ ಎಸ್. ದೇವಾಡಿಗ, ಭಕ್ತಿಗೀತೆ ಸಾನಿಕಾ ಎಸ್. ದ್ವಿತೀಯ(7ನೇ) ಬಹುಮಾನ ಪಡೆದುಕೊಂಡಿದ್ದಾರೆ.

ಕಿರಿಯರ ವಿಭಾಗ ದ್ವಿತೀಯ ಸಮಗ್ರ ಪ್ರಶಸ್ತಿ: ಕನ್ನಡ ಕಂಠಪಾಠ ಪ್ರಥಮ ಮನೋಜ್ಞಾ ದೇವಿ(4ನೇ), ಛದ್ಮವೇಷ ಪ್ರಥಮ ಶ್ರವಣ್ ವಿ ರೈ(4ನೇ), ಲಘುಸಂಗೀತ ಪ್ರಥಮ ವಂದಿತಾ(4ನೇ), ಭಕ್ತಿಗೀತೆ ದ್ವಿತೀಯ ಶ್ರೀದೇವಿ(4ನೇ), ಕ್ಲೇಮಾಡೆಲಿಂಗ್ ತೃತೀಯ ತಸ್ಮಯ್(4ನೇ), ಧಾರ್ಮಿಕ ಪಠಣ ತೃತೀಯ ವಂದಿತಾ(4ನೇ) ಬಹುಮಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here