ಉಪ್ಪಿನಂಗಡಿ ಶ್ರೀನಿಧಿ ಮೊಬೈಲ್ಸ್‌ನಲ್ಲಿ ಹಬ್ಬಗಳ ಪ್ರಯುಕ್ತ ಸ್ಮಾರ್ಟ್‌ಫೋನ್ ಫೆಸ್ಟ್: ಶ್ರೀನಿಧಿ ಗಿಫ್ಟ್ ಸ್ಕೀಂ ಡ್ರಾ. ವಿಜೇತ ಸತೀಶ್ ಬಿಳಿಯೂರುರವರಿಗೆ ಬಹುಮಾನ ಹಸ್ತಾಂತರ

0

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ವ್ಯವಹರಿಸುತ್ತಿರುವ ಶ್ರೀನಿಧಿ ಮೊಬೈಲ್ಸ್ ವತಿಯಿಂದ ಆಯೋಜಿಸಿದ್ದ ಶ್ರೀನಿಧಿ ಗಿಫ್ಟ್ ಸ್ಕೀಂನಲ್ಲಿ ಮೊದಲ ವಾರದ ಮೊದಲ ಕಂತಿನ ಡ್ರಾ.ದಲ್ಲಿ ವಿಜೇತರಾದ ಸತೀಶ್ ಬಿಳಿಯೂರುರವರಿಗೆ ಶ್ರೀನಿಧಿ ಮೊಬೈಲ್ಸ್ ಸಂಸ್ಥೆಯ ಮಾಲಕ ಜಯಪ್ರಕಾಶ್ ಶೆಟ್ಟಿರವರು ಬಹುಮಾನ ಹಸ್ತಾಂತರಿಸಿದರು. ರೂ. ೫೦೦ಕ್ಕೆ ರೂ.೧೦,೦೦೦ ಬೆಲೆಯ ಸ್ಮಾರ್ಟ್‌ಫೋನ್ ವಿಜೇತರಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ನಿತೇಶ್ ಶೆಟ್ಟಿ ವಿಜೇತ್ ಶೆಟ್ಟಿ ಹಾಗೂ ಭರತ್ ಕೊಡಿಂಬಾಡಿ ಉಪಸ್ಥಿತರಿದ್ದರು.

ಆಫರ್‌ಗಳು : ಶ್ರೀನಿಧಿ ಮೊಬೈಲ್ಸ್ ಸಂಸ್ಥೆಯು ಹಬ್ಬಗಳ ಪ್ರಯುಕ್ತ ಗ್ರಾಹಕರಿಗೊಸ್ಕರ ಸ್ಮಾರ್ಟ್‌ಫೋನ್ ಫೆಸ್ಟ್ ಮೂಲಕ ಸ್ಕೂಟರ್ ಹಾಗೂ ಟಿವಿ ಗೆಲ್ಲುವ ಅವಕಾಶ ಆಯೋಜಿಸಿದ್ದು ಹೊಸ ಹೊಸ ರೀತಿಯ ಆಫರ್‌ಗಳನ್ನು ಪರಿಚಯಿಸುತ್ತಿದೆ. ರಿಯಾಯಿತಿ ದೂರದಲ್ಲಿ ಮೊಬೈಲ್ ಮಾರಾಟ, ಸ್ಥಳದಲ್ಲೇ ಸಾಲಸೌಲಭ್ಯ, ಎಕ್ಸ್‌ಚೇಂಜ್ ಆಫರ್, ಹಾಗೂ ಕ್ಯಾಶ್‌ಬ್ಯಾಕ್‌ಗಳನ್ನು ನೀಡುತ್ತಿದೆ. ಗ್ರಾಹಕರು ಮುಂದಿನ ಮೂರು ತಿಂಗಳುಗಳ ಕಾಲ ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here