ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವವರ ಕಾರ್ಮಿಕರ ಸಂಘ ರಚನೆ

0

ಪುತ್ತೂರು: ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವವರ ಕಾರ್ಮಿಕರ ನೂತನ ಸಂಘದ ರಚನೆಯು ಸೆ.೨೫ರಂದು ಪುತ್ತೂರು ಅನುರಾಗ ವಠಾರದಲ್ಲಿ ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಕಾರ್ಮಿಕರಿಗೆ ಹಲವಾರು ಸಮಸ್ಯೆಗಳಿದ್ದು, ಇದರ ಬಗ್ಗೆ ಚರ್ಚಿಸಿ ಅ.೯ರಂದು ನೂತನ ಸಂಘವನ್ನು ಉದ್ಘಾಟಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸಲಹೆಗಾರ ಸೇಸಪ್ಪ ಕುಲಾಲ್, ಕೋಶಾಧಿಕಾರಿ ಈಶ್ವರ ನಾಯ್ಕ, ಸುಂದರ ಸೇಡಿಯಾಪು, ಕೋಶಾಧಿಕಾರಿ ಮೋನಪ್ಪ ಕೆ, ಸಂಜೀವ, ಬಾಬು ಬೆಳ್ಳಿಪ್ಪಾಡಿ, ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮುಕ್ವೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here