ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಕೆಸರುಡೊಂಜಿ ದಿನ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ನಡೆಯುವ 5 ನೇ ವರ್ಷದ ಕೆಸರಡೊಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಸೆ.೨೫ ರಂದು ನಡೆಯಿತು. ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ, ಸಂಘಟನೆಯ ಗೌರವಾಧ್ಯಕ್ಷ ಮೋಹನ್ ರೈ ಒಲೆಮುಂಡೋವುರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಲೋಕೇಶ್ ರೈ ಅಮೈ, ಸಂಘಟನೆ ಅಧ್ಯಕ್ಷ ಉದಯ್ ಸ್ವಾಮಿನಗರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆನಂದ ರೈ ಮಠ, ಮತ್ತು 4 ವರ್ಷದ ಯಶಸ್ವಿ ಕಾರ್ಯಕ್ರಮದ ರೂವಾರಿ ಸಂಘಟನಾ ಕಾರ್ಯದರ್ಶಿ ರಾಜೇಶ್.ಕೆ.ಮಯೂರ ಗೋಳ್ತೀಲ ಹಾಗೂ ಸಂಘಟನೆಯ ಸರ್ವ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಪ್ರಧಾನ ಕಾರ್ಯದರ್ಶಿ ಭವಿತ್ ಮಜ್ಜಾರ್ ವಿವರಿಸಿದರು.

ಸಹಾಯ ಧನ ವಿತರಣೆ
ಇತ್ತೀಚೆಗೆ ನಿಧನರಾದ ಗಿರಿಯಪ್ಪ ಗೌಡರವರ ಕುಟುಂಬಕ್ಕೆ ಸಂಘಟನೆ ಸಹಾಯ ನಿಧಿಯಿಂದ ರೂ. 16,500/_ ಸಾವಿರದ ಚೆಕ್ ಅನ್ನು ಸಂಘಟನೆಯ ಗೌರವಾಧ್ಯಕ್ಷ ಮೋಹನ್ ರೈ ಒಲೆಮುಂಡೋವು ವಿತರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೇಖಮಲೆ ಒಕ್ಕೂಟ ಇದರ ಸಹಯೋಗದಲ್ಲಿ ಉಚಿತ ಅಯುಷ್ಮಾನ್ ಕಾರ್ಡ್ (ಆಭಾ) ನೋಂದಾವಣೆ ಕಾರ್ಯಕ್ರಮ ನಡೆಯಿತು. ಸುಮಾರು 110 ಜನರು ಇದರ ಉಪಯೋಗ ಪಡೆದರು. ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ವತಿಯಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮವು ಮಜ್ಜಾರಡ್ಕದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಿಂಗಳಾಡಿ ಆರೋಗ್ಯ ಇಲಾಖೆಯ ನವ್ಯ , ಚೇತನಾ, ವಿದ್ಯಾಶ್ರೀ ಮತ್ತು ಆಶಾ ಕಾರ್ಯಕರ್ತೆಯರಾದ ದೇವಿಕಾ, ಲೀಲಾವತಿ ರೈ, ವೇದಾವತಿ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here