ಹಾರಾಡಿ: ಬೈಕ್ ಅಪಘಾತದಲ್ಲಿ ಗಾಯಗೊಂಡ ಸವಾರ‌ ಕೋಲ್ಪೆಯ ವಸಂತ್ ಮೃತ್ಯು

0

ಪುತ್ತೂರು: ಸೆ.26ರಂದು ಹಾರಾಡಿಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾಗಳ ನಡುವೆ ಡಿಕ್ಕಿ ಸಂಭವಿಸಿ ತೀವ್ರ ಗಾಯಗೊಂಡ ಬೈಕ್ ಸವಾರ ಕೋಲ್ಪೆ ನಿವಾಸಿ ಟ್ಯಾಂಕರ್ ಚಾಲಕ ವಸಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಸೆ.27ರಂದು ಮೃತಪಟ್ಟಿದ್ದಾರೆ.

ಸೆ. 26ರಂದು ಹಾರಾಡಿ ಸಮೀಪ ಆಟೋ ರಿಕ್ಷಾವೊಂದನ್ನು ಓವರ್ ಟೇಕ್ ಮಾಡಿದ ವಸಂತ್ ಅವರು ಚಲಾಯಿಸುತ್ತಿದ್ದ ಬೈಕ್, ವಿರುದ್ಧ ದಿಕ್ಕಿನಿಂದ ರಮೇಶ್ ಅವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ರಿಕ್ಷಾ ಚಾಲಕ ರಮೇಶ್ ಅವರ ನಿಯಂತ್ರಣ ತಪ್ಪಿ ಅಬ್ದುಲ್ ಜಲೀಲ್ ಅವರು ಚಲಾಯಿಸುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಕೋಲ್ಪೆ ನಿವಾಸಿ ವಸಂತ್ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಸಂತ್ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ತಂದೆ ತಿಮ್ಮಯ್ಯ ಸಪಲ್ಯ ಮತ್ತು ಮನೆ ಮಂದಿಯನ್ನು ಅಗಲಿದ್ದಾರೆ.

 

ಹಾರಾಡಿಯಲ್ಲಿ ಬೈಕ್, ರಿಕ್ಷಾ ಡಿಕ್ಕಿ – ಸವಾರನಿಗೆ ತೀವ್ರ ಗಾಯ

LEAVE A REPLY

Please enter your comment!
Please enter your name here