ಶಿರಾಡಿ: ನಿಯಂತ್ರಣ ತಪ್ಪಿ ಕಲ್ಲಿಗೆ ಡಿಕ್ಕಿಯಾದ ಕಾರು, ದಂಪತಿಗೆ ಗಾಯ

0

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾದ ಪರಿಣಾಮ ದಂಪತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಸೆ.25ರಂದು ರಾತ್ರಿ ನಡೆದಿದೆ.

ಕೌಕ್ರಾಡಿ ಗ್ರಾಮದ ದೊಂತಿಲ ನಿವಾಸಿ ಜಾರ್ಜ್ ಕೆ.ವಿ., ಹಾಗೂ ಅವರ ಪತ್ನಿ ಸೌಮ್ಯ ಗಾಯಗೊಂಡವರಾಗಿದ್ದಾರೆ. ಇವರು ದೊಂತಿಲದಿಂದ ಅಡ್ಡಹೊಳೆಯಲ್ಲಿನ ತಮ್ಮ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೋಗಿ ಹಿಂತಿರುಗಿ ಬರುತ್ತಿದ್ದ ವೇಳೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಹೆದ್ದಾರಿ ಬದಿಯ ಕಲ್ಲಿಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಜಾರ್ಜ್ ಕೆ.ವಿ.ಯವರ ಮುಖಕ್ಕೆ ಹಾಗೂ ಅವರ ಪತ್ನಿ ಸೌಮ್ಯರವರ ಬಲ ಕೈಗೆ ಗಾಯವಾಗಿದ್ದು ಇಬ್ಬರು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಜಾರ್ಜ್ ಕೆ.ವಿ.ಯವರ ಸಹೋದರ ಸಿಜು ವಿ.ಕೆ.ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here