ಪುತ್ತೂರು :ರಾಜ್ಯ ಗುಪ್ತ ವಾರ್ತೆ ಮಂಗಳೂರು ಘಟಕದ ಎಎಸೈ ಸುರೇಶ್ ರೈ ಅವರಿಗೆ ಘಟಕದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಪೊಲೀಸ್ ಇಲಾಖೆಯಲ್ಲಿ ಸುಮಾರು 33 ವರ್ಷ ಸೇವೆ ಸಲ್ಲಿಸಿದ ಮೂಲತಃ ವಿಟ್ಲ ಕೊಲ್ಯ ನಿವಾಸಿ ಪ್ರಸ್ತುತ ಪುತ್ತೂರು ನೆಹರೂನಗರ ಕಾರ್ಜಾಲು ನಿವಾಸಿ ಸುರೇಶ್ ರೈ ಅವರಿಗೆ ರಾಜ್ಯ ಗುಪ್ತ ವಾರ್ತೆ ಮಂಗಳೂರು ಘಟಕದ ವತಿಯಿಂದ ಬೀಳ್ಕೊಡುಗೆ ನಡೆಯಿತು.
ರಾಜ್ಯ ಗುಪ್ತ ವಾರ್ತೆ ಮಂಗಳೂರು ಘಟಕದ ಪ್ರಭಾರ ಡಿವೈಎಸ್ಪಿ ನಂದ ಕುಮಾರ್,ಸಬ್ ಇನ್ಸ್ಪೆಕ್ಟರ್ ಗಳಾದ ಭಂಡರಾಜ್ ಪಾಂಡ್ರೆ, ರವಿ,ಎಎಸೈಯವರು,ಸಿಬಂದಿಗಳು,ರಾಜ್ಯ ಗುಪ್ತ ವಾರ್ತೆಯ ನಿವೃತ ಅಧಿಕಾರಿಗಳು,ಸುರೇಶ್ ರೈ ಅವರ ಪತ್ನಿ ವನಜಾಕ್ಷಿ ರೈ ,ಮಗಳು ಇನ್ಫೋಸಿಸ್ ಉದ್ಯೋಗಿ ಪರೀಕ್ಷಾ ರೈ ಉಪಸ್ಥಿತರಿದ್ದರು.
ಸುರೇಶ್ ರೈ ಅವರು 1989ರ ನವೆಂಬರ್ 6ರಂದು ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪಿಸಿಯಾಗಿ ವೃತ್ತಿ ಜೀವನ ಆರಂಭಿಸಿ ,ಈ ಠಾಣೆಯಲ್ಲಿ 4.6 ವರ್ಷ ಸೇವೆ ಬಳಿಕ ಪುತ್ತೂರು ಎಎಸ್ಪಿ ಕಚೇರಿಯಲ್ಲಿ 17 ವರ್ಷ,ಮೆಸ್ಕಾಂ ವಿಜಿಲೆನ್ಸ್ ನಲ್ಲಿ 4.6 ವರ್ಷ ಸೇವೆ ಸಲ್ಲಿಸಿ 2016ರಲ್ಲಿ ಎಎಸೈ ಆಗಿ ಪದೋನ್ನತಿಗೊಂಡು ಸುಳ್ಯ ಪೊಲೀಸ್ ಠಾಣೆಯಲ್ಲಿ 1 ವರ್ಷ,ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯದಲ್ಲಿ 2 ವರ್ಷ,ಈಶ್ವರ ಮಂಗಲ ಪೊಲೀಸ್ ಹೊರಠಾಣೆಯಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದಾರೆ. ಕಳೆದ 2 ವರ್ಷಗಳಿಂದ ಮಂಗಳೂರಿನ ರಾಜ್ಯ ಗುಪ್ತ ವಾರ್ತೆಯಲ್ಲಿ ಕರ್ತವ್ಯದಲ್ಲಿದ್ದು ಅವರು ಸೆ.30ರಂದು ನಿವೃತಿಯಾದರು.