ಸೇಡಿಯಾಪು: ಹಣ ಸಂಗ್ರಹಣಾ ಕೇಂದ್ರ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಬನ್ನೂರು ವಲಯ ಸೇಡಿಯಾಪು ಕಾರ್ಯಕ್ಷೇತ್ರದ ನೂತನ ಹಣ ಸಂಗ್ರಹಣಾ ಕೇಂದ್ರದ ಉದ್ಘಾಟನೆ ಅ.2ರಂದು ನಡೆಯಿತು.


ಪುತ್ತೂರು ತಾಲೂಕು ಯೋಜನಾಧಿಕಾರಿ ಆನಂದ ಕೆ. ಉದ್ಘಾಟಿಸಿದರು. ಸೇಡಿಯಾಪು ಒಕ್ಕೂಟದ ಅಧ್ಯಕ್ಷೆ ಕೃಷ್ಣವೇಣಿ, ಕುಂಟ್ಯಾನ ಒಕ್ಕೂಟದ ಉಪಾಧ್ಯಕ್ಷ ಸತೀಶ್ ಕುಲಾಲ್, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ರತ್ನಾಕರ ಪ್ರಭು, ಆನಂದ್ ಕುಲಾಲ್, ಕೋಡಿಂಬಾಡಿ ಒಕ್ಕೂಟದ ಸೇವಾ ಪ್ರತಿನಿಧಿ ಕಮಲ, ಸತೀಶ್ ಮಡಿವಾಳ, ಗಂಗಾಧರ ಕುಲಾಲ್, ಪವಿತ್ರ ಸೇಡಿಯಾಪು, ಚಂದ್ರಶೇಖರ ಕುಲಾಲ್, ಚಂದ್ರಹಾಸ ಮಡಿವಾಳ,ವೀಣಾ ಮತ್ತು ದೀಕ್ಷಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬನ್ನೂರು ವಲಯದ ಮೇಲ್ವಿಚಾರಕಿ ಪುಪ್ಪಲತಾ ಸ್ವಾಗತಿಸಿದರು. ಸೇಡಿಯಾಪು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಹೇಮಾವತಿ ವಂದಿಸಿದರು.

LEAVE A REPLY

Please enter your comment!
Please enter your name here