ಗಾಂಧೀಜಯಂತಿ-ಸಂಸ್ಥೆಯ ವಾರ್ಷಿಕೋತ್ಸವ ಹಿನ್ನೆಲೆ : ಜಯಕರ್ನಾಟಕ ಜನಪರ ವೇದಿಕೆಯಿಂದ ಹಣ್ಣು ಹಂಪಲು ವಿತರಣೆ

0

 

 

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಗಾಂಧಿ ಜಯಂತಿ ಮತ್ತು ಜಯಕರ್ನಾಟಕ ಜನಪರ ವೇದಿಕೆಯ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ಅ.2ರಂದು ನಡೆಯಿತು. ಸುಮಾರು 70ಕ್ಕೂ ಅಧಿಕ ರೋಗಿಗಳ ಅರೋಗ್ಯ ವಿಚಾರಿಸಿ ಅವರಿಗೆ ಆತ್ಮ ಸ್ಥೈರ್ಯ ನೀಡಿ ಹಣ್ಣು ಹಂಪಲು ವಿತರಿಸಲಾಯಿತು.
ಪರಿಸರವಾದಿಗಳು ಮತ್ತು ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಪುತ್ತೂರುರವರು ಗಾಂಧಿ ಜಯಂತಿಯಂದು ಸ್ಥಾಪನೆಯಾದ ಜಯಕರ್ನಾಟಕ ಜನಪರ ವೇದಿಕೆಯ ವಾರ್ಷಿಕೋತ್ಸವವನ್ನು ಅ.2ರಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮದೊಂದಿಗೆ ಆಯೋಜಿಸಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ನಡೆಸಲಾದ ಈ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾದ ವಿಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತೂರು ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ದೀಪಕ್ ಅಮೀನ್, ಬಂಟ್ವಾಳ ತಾಲೂಕು ಉಸ್ತುವಾರಿ ಜಗನ್ನಾಥ್ ರೈ ಮೇರಾವು, ಸದಸ್ಯರಾದ ಅಮರ್ ರೈ, ತಿಲಕ್ ರಾಜ್ ಶೆಟ್ಟಿ,ಸುಮಿತ್ ನಾಯ್ಕ್, ಪುರಂದರ ರೈ, ವಿನೀಶ್ ಗೌಡ, ನವೀನ್ ರೈ ಕುತ್ಯಾಡಿ, ಸುನಿಲ್, ಸೋಮು,ನಂದಕುಮಾರ್, ಮನೋಜ್ ಆಳ್ವ, ಯಶವಂತ್ ಶೆಟ್ಟಿ, ಪ್ರಜ್ವತ್ ರೈ, ಮಹೇಶ್ ಶೆಟ್ಟಿ, ದಿಲೀಪ್ ಮತ್ತು ಸಂದೀಪ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here