ಸುಧಾಭರಣೀ ಆಯುರ್ವೇದ ಚಿಕಿತ್ಸಾಲಯ ಶುಭಾರಂಭ

0

ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್‌ನ ಎದುರಿನ ಕೇಶವಶ್ರೀ ಶಾಪಿಂಗ್ ಸೆಂಟರ್‌ನಲ್ಲಿ ಸುಧಾಭರಣೀ ಆಯುರ್ವೇದ ಚಿಕಿತ್ಸಾಲಯ ಅ.5ರಂದು  ಶುಭಾರಂಭಗೊಂಡಿತು.

ನೂತನ ಚಿಕಿತ್ಸಾಲಯವನ್ನು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಭಾಗವಹಿಸಿದ್ದರು.

ಅತಿಥಿಗಳಾಗಿ ಸುಶ್ರುತ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರವಿಶಂಕರ ಪೆರ್ವಾಜೆ, ಕಟ್ಟಡ ಮಾಲಕರು ಅಜಿತ್ ನಾಯಕ್‌ ,   ಸುರೇಶ್ ಭಟ್,  ಭಾರ್ಗವಿ ಎಸ್. ಭಟ್ ಉಪಸ್ಥಿತರಿದ್ದರು. ಡಾ. ಈಶ್ವರಕೀರ್ತಿ ಕಾರ‍್ಯಕ್ರಮ ನಿರೂಪಿಸಿ, ಡಾ. ರಾಮಕಿರಣ್  ವಂದಿಸಿದರು.

LEAVE A REPLY

Please enter your comment!
Please enter your name here