ಸುಶ್ರುತ ಆಯುರ್ವೇದ ಆಸ್ಪತ್ರೆಯ ಎಂ.ಡಿ, ಆಯುರ್ವೇದ ಸರ್ಜನ್ ಡಾ.ರವಿಶಂಕರ್ ಪೆರ್ವಾಜೆಗೆ ಸುಶ್ರುತ ಅವಾರ್ಡ್

0

ಪುತ್ತೂರು : ರಾಷ್ಟ್ರೀಯ ಸುಶ್ರುತ ಅಸೋಸಿಯೇಶನ್ ಇಂಡಿಯಾ ವತಿಯಿಂದ ನೀಡಲ್ಪಡುವ ಸುಶ್ರುತ ಅವಾರ್ಡ್ 2021ಕ್ಕೆ ಪುತ್ತೂರಿನ ಸುಶ್ರುತ ಆಯುರ್ವೇದ ಆಸ್ಪತ್ರೆಯ ಎಂ.ಡಿ, ಆಯುರ್ವೇದ ಸರ್ಜನ್ ಡಾ.ರವಿಶಂಕರ್ ಪೆರ್ವಾಜೆ ಭಾಜನರಾಗಿದ್ದಾರೆ.


ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ. ರವಿಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 33 ವರ್ಷಗಳ ಕ್ಲಿನಿಕಲ್ ಅನುಭವ ಹೊಂದಿರುವ ಡಾ. ರವಿಶಂಕರ್ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ 10 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ, ಕಾರ್ಯಾಗಾರಗಳಲ್ಲಿ 100ಕ್ಕೂ ಅಧಿಕ ಉಪನ್ಯಾಸ ನೀಡಿದ್ದಾರೆ. ಶಲ್ಯತಂತ್ರ ಕ್ಷೇತ್ರದಲ್ಲಿ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಜೀವಮಾನ ಸಾಧನಾ ಪ್ರಶಸ್ತಿ ಮತ್ತು ಆಯುರ್ವೇದ ರತ್ನ ಪ್ರಶಸ್ತಿ ಪಡೆದಿದ್ದಾರೆ. ಡಾ. ರವಿಶಂಂಕರ್ ಪೆರ್ವಾಜೆ ಅವರು ಶಲ್ಯತಂತ್ರ, ಸಂಶೋಧನೆ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಸುಶ್ರುತ ಅವಾರ್ಡ್ ನೀಡಲಾಗಿದೆ.

LEAVE A REPLY

Please enter your comment!
Please enter your name here