ಉದ್ಯಮಿ ಸತೀಶ್ ರೈ ಕಟ್ಟಾವುರವರಿಗೆ ಗೌರವ ಡಾಕ್ಟರೇಟ್

0

ಪುತ್ತೂರು: ಕಟ್ಟಾವು ಇನ್ಸೂರೆನ್ಸ್ ಸಂಸ್ಥೆಯ ಮಾಲಕ, ಉದ್ಯಮಿ ಸತೀಶ್ ರೈ ಕಟ್ಟಾವುರವರಿಗೆ ಭಾರತ್ ವರ್ಚ್‌ವುಲ್ ಯೂನಿವರ್‌ಸಿಟಿ ಫಾರ್ ಫೀಸ್ ಆಂಡ್ ಏಜುಕೇಶನ್ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಅ. 8 ರಂದು ಜರಗಿದ ಸಮಾರಂಭದಲ್ಲಿ ಬಿಸ್‌ನೆಸ್ ಡೆವಲ್ಪ್‌ಮೆಂಟ್ ವಿಷಯದಲ್ಲಿ ಗೌರವ ಡಾಕ್ಟರೇಟ್ ನೀಡಿ, ಗೌರವಿಸಲಾಗಿದೆ.
ಸತೀಶ್ ರೈ ಕಟ್ಟಾವುರವರು ನಿರಂತರ 5 ವರ್ಷಗಳಿಂದ ತನ್ನ ವ್ಯವಹಾರಕ್ಕಾಗಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಟಾಪ್ ಫಾರ್‌ರ್ಮಾರ್‌ಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರ ಕಟ್ಟಾವು ವಾಹನ ಇನ್ಸೂರೆನ್ಸ್ ಸಂಸ್ಥೆಯ ಪ್ರಧಾನ ಕಚೇರಿಯು ಪುತ್ತೂರು ದರ್ಭೆಯಲ್ಲಿ ಇದ್ದು, ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಒಟ್ಟು 27 ಶಾಖೆಗಳು ಕಾರ್‍ಯನಿರ್ವಹಿಸುತ್ತಿದೆ.

LEAVE A REPLY

Please enter your comment!
Please enter your name here