ಬಾಲವನದಲ್ಲಿ ಡಾ| ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ

0

ಕಾರಂತರ ಪ್ರಶಸ್ತಿ, ಕಾರಂತರ ಪುಸ್ತಕಗಳು, ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಪ್ರದರ್ಶನ ಸೇರಿದಂತೆ 35ಕ್ಕೂ ಅಧಿಕ ಪ್ರದರ್ಶನಗಳು

ಪುತ್ತೂರ : ಕಡಲತಡಿಯ ಭಾರ್ಗವ ಜ್ಞಾನಪೀಠ ಡಾ| ಶಿವರಾಮ ಕಾರಂತರ ೧121ನೇ ಜನ್ಮದಿನಾಚರಣೆ ಮತ್ತು ಕಾರಂತ ಬಾಲವನ ಪ್ರಶಸ್ತಿ 2022ರ ಪ್ರದಾನ ಸಮಾರಂಭವು ಅ.10ರಂದು ಪರ್ಲಡ್ಕ ಬಾಲವನದಲ್ಲಿ ನಡೆಯಿತು.
ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಡಾ| ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ ಬೆಳಿಗ್ಗೆ ಕಾರಂತರ ಜನ್ಮದಿನೋತ್ಸವ, ಸಂಜೆ ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ ವಿ ಇವರಿಗೆ ಬಾಲವನ ಪ್ರಶಸ್ತಿ 2022ರ ಪ್ರದಾನ ಮಾಡಲಾಯಿತು.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಡಾ| ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್, ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಸೀಲ್ದಾರ್ ನಿಸರ್ಗ ಪ್ರಿಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಂ ಪಿ ಶ್ರೀನಾಥ್, ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಹಿರಿಯ ಸಾಹಿತಿ ಬಿ ಪುರಂದರ ಭಟ್, ಕೆ.ಸೀತಾರಾಮ ರೈ ಸವಣೂರು , ಪ್ರೊ ವಿ ಬಿ ಅರ್ತಿಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ| ವರದರಾಜ್ ಚಂದ್ರಗಿರಿ ಅವರು ಅಭಿನಂದನಾ ನುಡಿಯನ್ನಾಡಿದರು. ರಮೇಶ್ ಉಳಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here