ಉಪ್ಪಿನಂಗಡಿ: ಎಎಸ್‌ಐ ಆಗಿ ಮುಂಭಡ್ತಿ – ಬೆಳ್ತಂಗಡಿ ಸಂಚಾರಿ ಠಾಣೆಗೆ ವರ್ಗ

0

ಉಪ್ಪಿನಂಗಡಿ: ಈಗಾಗಲೇ ಎಸಿಬಿಯಲ್ಲಿ ಹೆಡ್‌ಕಾನ್ಸ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರಿಪ್ರಸಾದ್ ಎಎಸೈ ಆಗಿ ಪದೋನ್ನತಿಗೊಂಡು ಬೆಳ್ತಂಗಡಿಯ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.


ಮೂಲತಃ ಮಂಗಳೂರಿನವರಾದ ಇವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸಿದ ವೇಳೆ ಹಲವಾರು ಘಟನೆಗಳಲ್ಲಿ ಪರಾಕ್ರಮ ಸಹಿತ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಠಾಣೆಯ ಮುಂದೆ ಗುಂಪು ದಾಳಿ ನಡೆದ ವೇಳೆ ಲಾಠಿಯೊಂದಿಗೆ ಏಕಾಂಗಿಯಾಗಿ ಕಾರ್ಯಾಚರಣೆ ನಡೆಸಿ ಗುಂಪನ್ನು ಚದುರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರ ಇಲಾಖೆಯಲ್ಲಿನ ಗಮನಾರ್ಹ ಕಾರ್ಯ ಸಾಧನೆಗೆ ಇತ್ತೀಚೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕದ ಪುರಸ್ಕಾರವೂ ಲಭಿಸಿತ್ತು.

LEAVE A REPLY

Please enter your comment!
Please enter your name here