ಕಲ್ಲೇಗ ಶ್ರೀದೇವಿ ಟೈಗರ್ಸ್‌ ನಿಂದ ಐವರಿಗೆ ಆರ್ಥಿಕ ನೆರವು

0

ಪುತ್ತೂರು:    ದಸರಾ ಹಬ್ಬದ ಪ್ರಯುಕ್ತ  ಕಲ್ಲೇಗ ಶ್ರೀದೇವಿ ಟೈಗರ್ಸ್‌ ವತಿಯಿಂದ ನಡೆಸಲಾದ ಪ್ರಥಮ ವರ್ಷದ  ಹುಲಿ ಕುಣಿತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದ ಉಳಿಕೆ ಮೊತ್ತದಲ್ಲಿ ಐವರಿಗೆ ಧನಸಹಾಯ ಮಾಡಲಾಯಿತು.

ಕಲಾವಿದ ಯೋಗೀಶ್ ಕರ್ಮಲರವರ ಪುತ್ರ 2 ವರ್ಷ ವಯಸ್ಸಿನ ಗೌರವ್ ಅವರ ಚಿಕಿತ್ಸೆಗೆ, ಬನ್ನೂರು ಸೇಡಿಯಾಪು ಎಂಬಲ್ಲಿನ 13 ವರ್ಷದ ಕೃತಿಯವರ ಚಿಕಿತ್ಸೆಗೆ, ನೆಲ್ಲಿಗುಡ್ಡೆ ನವನಗರ ವಿಟ್ಲ ಕಸಬ ಗ್ರಾಮದ  ವಿದ್ಯಾರ್ಥಿನಿಯೋರ್ವಳ ಶಿಕ್ಷಣಕ್ಕೆ ಮತ್ತು  ಪುಣಚ ಗ್ರಾಮದ ತೋರಣಕಟ್ಟೆ ಚಂದ್ರಾವತಿ ಯವರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು. ಅಲ್ಲದೆ, 750 ಶ್ವಾನಗಳ ಹಸಿವು ನೀಗಿಸುವ ಸೇವಾ ಕಾರ್ಯ ಮಾಡುತ್ತಿರುವ ಮಂಗಳೂರು ಬಳ್ಳಾಲ್‌ ಬಾಗ್ ನಿವಾಸಿ ರಜನಿ ಶೆಟ್ಟಿಯವರಿಗೆ ಕಲ್ಲೇಗ ಶ್ರೀದೇವಿ ಟೈಗರ್ಸ್‌ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

LEAVE A REPLY

Please enter your comment!
Please enter your name here