ಮಂಜಲ್ಪಡ್ಪು ಬೈಪಾಸ್ ರಸ್ತೆಯ ಹೊಟೇಲ್ ಬಳಿ ಪಾನ್ ಸ್ಟಾಲ್ ನ ವ್ಯಕ್ಯಿಗೆ ಹಲ್ಲೆ

0

ಪುತ್ತೂರು: ಮಂಜಲ್ಪಡ್ಪು ಬೈಪಾಸ್ ರಸ್ತೆಯ ಹೊಟೇಲ್ ಬಳಿ ಪಾನ್ ಸ್ಟಾಲ್ ನ ವ್ಯಕ್ತಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಅ.12 ರ ತಡ ರಾತ್ರಿ ನಡೆದಿದೆ.

ಮಂಜಲ್ಪಡ್ಪು ಬೈಪಾಸ್ ರಸ್ತೆಯ ಉದಯಗಿರಿ ಹೊಟೇಲ್ ಬಳಿಯ ಪಾನ್ ಸ್ಟಾಲ್ ನ ಲಕ್ಷ್ಮಣ ಎಂಬವರು ಹಲ್ಲೆಗೊಳಗಾದವರು. ಗಾಯಾಳು ಲಕ್ಷ್ಮಣ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅ.12 ರಂದು ರಾತ್ರಿ ಬೀಡ ಪಡೆದುಕೊಂಡ ರೂಪರಾಜ್, ಸನತ್, ವಿಕ್ಯಾತ್ ಅವರು ಹಣ ವನ್ನು ಗೂಗಲ್ ಪೇ ಮೂಲಕ ಮಾಡಿದಾಗಿ ಹೇಳಿದ್ದರು. ಆದರೆ ಗೂಗಲ್ ಪೇ ಯಲ್ಲಿ ಹಣ ಪಾವತಿ ಆಗಿಲ್ಲ ಎಂದು ಪಾನ್ ಬೀಡದ ಲಕ್ಷ್ಮಣ ಅವರು ಹೇಳಿದಾಗ ರೂಪರಾಜ್, ಸನತ್, ವಿಕ್ಯಾತ್ ಅವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಲಕ್ಷ್ಮಣ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here