ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ವರ್ಗಾವರ್ಗಿ

0

ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯಾಧಿಕಾರಿಯಾಗಿದ್ದ ಮಧುಸೂಧನ್‌ರವರಿಗೆ ವರ್ಗಾವಣೆ ಆದೇಶ ಆಗಿದ್ದು, ಇವರಿಂದ ತೆರವಾಗುವ ಜಾಗಕ್ಕೆ ಕೆ.ಕೆ. ಜಯಪ್ರಕಾಶ್ ಎಂಬವರಿಗೆ ಆದೇಶ ಆಗಿರುತ್ತದೆ.
ಉಪ್ಪಿನಂಗಡಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಧುಸೂಧನ್‌ರವರು 2019 ಜುಲೈಯಲ್ಲಿ ಇಲ್ಲಿಗೆ ಆಗಮಿಸಿದ್ದು, ಕಳೆದ 3 ವರ್ಷಗಳ ಅವಧಿಯಲ್ಲಿ ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಕ್ಷಿತಾರಣ್ಯದಿಂದ ಮರಗಳ ಕಳವು ಘಟನೆಗಳಿಗೆ ಬ್ರೇಕ್ ನೀಡಿದ್ದ ಇವರು ಹಲವು ಮರ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದರು. ತನ್ಮೂಲಕ ಪರಿಸರ ಪ್ರಿಯರ ಪ್ರಶಂಸೆಗೆ ಪಾತ್ರರಾಗಿದ್ದರು.
ಕೆ.ಕೆ. ಜಯಪ್ರಕಾಶ್‌ಗೆ ಆದೇಶ:
ಮಧುಸೂಧನ್‌ರವರಿಂದ ತೆರವು ಆಗುವ ಜಾಗಕ್ಕೆ ಮಂಗಳೂರು ವಲಯ ಅರಣ್ಯಾಧಿಕಾರಿಯಾಗಿದ್ದ ಕೆ.ಕೆ. ಜಯಪ್ರಕಾಶ್ ಎಂಬವರಿಗೆ ಆದೇಶ ಆಗಿರುತ್ತದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಪುತ್ತೂರು ಘಟಕದ ವಲಯ ಅರಣ್ಯಾಧಿಕಾರಿಯಾಗಿದ್ದ ಸೈಯ್ಯದ್ ನದಿಮ್‌ರವರಿಗೆ ಮೈಸೂರು ವಿಭಾಗದ ಟಿ. ನರಸೀಪುರ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆ ಆದೇಶ ಆಗಿರುತ್ತದೆ.

LEAVE A REPLY

Please enter your comment!
Please enter your name here