ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆ 12ನೇ ವರ್ಷಕ್ಕೆ ಪಾದಾರ್ಪಣೆ

0

ಶಾಖಾ ಕಛೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

ಪುತ್ತೂರು : ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯ 12ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಸಂಘದ ಕಚೇರಿಯಲ್ಲಿ ಅ.16ರಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. 34ನೇ ನೆಕ್ಕಿಲಾಡಿ ರಾಘವೇಂದ್ರ ಮಠದ ಅರ್ಚಕ ರಾಘವೇಂದ್ರ ಭಟ್‌ರವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.


ಸನ್ಮಾನ : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯಿಂದ ಆಲಂಕಾರು ಶಾಖೆಗೆ ವರ್ಗಾವಣೆಗೊಂಡ ಶಾಖಾ ಮ್ಯಾನೇಜರ್ ರೇವತಿಯವರನ್ನು ಸನ್ಮಾನಿಸಲಾಯಿತು. ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಸ್ವಾಗತಿಸಿ ಉಪ್ಪಿನಂಗಡಿ ಶಾಖಾ ಮ್ಯಾನೇಜರ್ ದಿನೇಶ್ ಪಿ. ವಂದಿಸಿದರು. ನಿರ್ದೇಶಕರುಗಳಾದ ರಾಮಕೃಷ್ಣ ಗೌಡ ಕರ್ಮಲ, ಸಂಜೀವ ಗೌಡ ಕುದ್ಲೂರು, ಲೋಕೇಶ್ ಸಿ. ಹೆಚ್, ತೇಜಸ್ವಿನಿ ಶೇಖರ ಗೌಡ, ಮಾಜಿ ನಿರ್ದೇಶಕರಾದ ನೇತ್ರಾವತಿ ಕೆ.ಪಿ ಗೌಡ, ಲಿಂಗಪ್ಪ ಗೌಡ ಕಡೆಂಬ್ಯಾಲು, ವೆಂಕಪ್ಪ ಗೌಡ ಉಪ್ಪಿನಂಗಡಿ, ಶೀನಪ್ಪ ಗೌಡ ವಳಕಡಮ, ರಮೇಶ್ ಗೌಡ ಬೇರಿಕೆ, ಗಣೇಶ್ ಮಠಂದೂರು, ಶಾರದಾ ಎ., ಆಂತರಿಕ ಲೆಕ್ಕ ಪರಿಶೋಧಕ ಶ್ರೀಧರ ಗೌಡ ಕಣಜಾಲು, ಗೌರವ ಸಲಹೆಗಾರ ಶಿವರಾಮ ಗೌಡ ಇಡ್ಯಪೆ, ನೆಲ್ಯಾಡಿ ಶಾಖಾ ಮ್ಯಾನೇಜರ್ ವಿನೋದ್‌ರಾಜ್ ಎಸ್., ಕುಂಬ್ರ ಶಾಖಾ ಮ್ಯಾನೇಜರ್ ಹರೀಶ್ ವೈ, ಪುತ್ತೂರು ಶಾಖೆಯ ಸಿಬ್ಬಂದಿಗಳಾದ ರಾಧಾಕೃಷ್ಣ ಪಿ. ಪ್ರಕಾಶ್ ಬಿ., ಕುಂಬ್ರ ಶಾಖಾ ಸಿಬ್ಬಂದಿ ದಿನೇಶ್ ಕುಮಾರ್, ಪ್ರಮುಖರಾದ ಸುಂದರ ಗೌಡ, ಮೋನಪ್ಪ ಗೌಡ ಸರೋಳಿ, ಈಶ್ವರ ನಾಯ್ಕ, ರಾಮಣ್ಣ ಗೌಡ ನೆಕ್ಕರೆ, ಬಾಲಚಂದ್ರ ಗುಂಡ್ಯ, ಆನಂದ ಗೌಡ, ಗೋಪಾಲ ಗೌಡ ನಂದಿಲ, ಗಣೇಶ್ ನ್ಯೂ ಅಶ್ವಿನಿ, ಚಂದ್ರಶೇಖರ ಹೆನ್ನಾಲ, ಲಕ್ಷ್ಮಣ ಮಿತ್ತಿಲ, ಆನಂದ ಗೌಡ ಇರ್ಕಿ, ಸುಂದರ ಗೌಡ ಒಕೆ, ಸದಾನಂದ, ಕೃಷ್ಣಪ್ಪ ಗೌಡ ಬೊಳ್ಳಾವು, ಸಾಂತಪ್ಪ ಗೌಡ ಹೆನ್ನಾಳ, ವಿಶ್ವನಾಥ ಟೈಲರ್, ಸುನೀಲ್ ಶೇಟ್, ಚಿದಾನಂದ ಮೈತಾಳಿಕೆ, ಸುರೇಶ್ ಕೆ., ವಿಶ್ವನಾಥ, ವಕೀಲರಾದ ಜಯಪ್ರಕಾಶ್, ಪಿಗ್ಮಿ ಸಂಗ್ರಾಹಕರಾದ ಪಧ್ಮನಾಭ ಗೌಡ, ಮೋನಪ್ಪ ಗೌಡ, ಸಿಬ್ಬಂದಿಗಳಾದ ಅಮಿತಾ ಡಿ., ಶಿವಕುಮಾರ್ ಪಿ., ಚೇತನ್ ಕುಮಾರ್, ಸುರೇಶ್ ಕೆ., ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here