ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯಲ್ಲಿ ಆಂಗ್ಲ ಭಾಷಾ ಬಲವರ್ಧನಾ ಕಾರ್ಯಗಾರದ ಸಮಾರೋಪ

0

ಪುತ್ತೂರು : ವಿವೇಕಾನಂದ ಸಿ. ಬಿ. ಎಸ್. ಇ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಆಯೋಜಿಸಲಾದ ಮೂರು ದಿನಗಳ ಆಂಗ್ಲ ಭಾಷಾ ಬಲವರ್ಧನಾ ಕಾರ್ಯಾಗಾರವು ಅ.15ರಂದು ಮುಕ್ತಾಯಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಖಜಾಂಚಿಯಾದ ಡಾ|ಅಶೋಕ್ ಪ್ರಭು ವಹಿಸಿ, ಕಾರ್ಯಾಗಾರದಿಂದ ಪಡೆದ ಅನುಭವಗಳನ್ನು ಶಿಕ್ಷಕರು ತಮ್ಮ ತರಗತಿಗಳಲ್ಲಿ ಪರಿಣಾಮಕಾರಿಯಾಗಿ ಬಳಸಬೇಕೆಂದು ತಿಳಿಸಿದರು.  ಸಂಪನ್ಮೂಲ ವ್ಯಕ್ತಿಗಳಾದ ಶ್ರುತಿ ಎಸ್ ಹಾಗೂ ಅಶೋಕ್ ತೆಕ್ಕಟ್ಟೆ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಕ್ಷಕರು ತಾವು ಪಡೆದ ಸೃಜನಾತ್ಮಕ ಅನುಭವಗಳನ್ನು ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ  ಸಿಂಧೂ ವಿ.ಜಿಯವರ ಉಪಸ್ಥಿತಿಯಲ್ಲಿ ಸಹಶಿಕ್ಷಕರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.

LEAVE A REPLY

Please enter your comment!
Please enter your name here