ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಕಡಬ ಶಾಖೆಯ ಗ್ರಾಹಕ ಸಂಪರ್ಕ ಸಭೆ

0

ಪುತ್ತೂರು : ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಕಡಬ ಶಾಖೆಯ ಗ್ರಾಹಕ ಸಂಪರ್ಕ ಸಭೆಯು ಸೈಂಟ್ ಜೋಕಿಮ್ಸ್ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಸಮುದಾಯ ಭವನದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2022-23ನೇ ಅರ್ಧವಾರ್ಷಿಕ ಅವಧಿ ಅಂತ್ಯ 30-9.2022ಕ್ಕೆ ರೂ.392 ಕೋಟಿ ಠೇವಣಿ ಹಾಗೂ ರೂ.328 ಕೋಟಿ ಹೊರಬಾಕಿ ಸಾಲದೊಂದಿಗೆ ರೂ.720 ಕೋಟಿ ಒಟ್ಟು ವ್ಯವಹಾರವನ್ನು ದಾಖಲಿಸಿದೆ. ಅನುತ್ಪಾದಕ ಅಸ್ತಿ ಶೂನ್ಯ ಪ್ರಮಾಣದಲ್ಲಿದ್ದು, ರೂ.2.94 ಕೋಟಿ ಲಾಭ ದಾಖಲಿಸಿ ಉಜ್ವಲ ಪ್ರಗತಿ ಸಾಧಿಸಿದೆ. ಸಂಘದ ಈ ಸಾಧನೆಗೆ ಕಾರಣಕರ್ತರಾದ ಗ್ರಾಹಕರು ಅಭಿನಂದನಾರ್ಹರು  ಎಂದು ತಿಳಿಸಿದರು.
ಸಂಘದ ನಿರ್ದೇಶಕರು ಮತ್ತು ಶಾಖಾ ಉಸ್ತುವಾರಿ ನಿರ್ದೇಶಕ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಸೈಟ್ ಜೋಕಿಮ್ಸ್ ಚರ್ಚ್‌ನ ಫಾ| ಅಮಿತ್ ಪ್ರಕಾಶ್ ರೋಡ್ರಿಗಸ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ 5 ಮಂದಿ ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು.
ಶಾಖಾ ವ್ಯವಸ್ಥಾಪಕ ದಿನೇಶ್ ಶೆಟ್ಟಿ ಶಾಖಾ ವರದಿ ಮಂಡಿಸಿದರು. ಮಹಾಪ್ರಬಂಧಕ ಗಣೇಶ್ ಜಿ.ಕೆ. ವಂದಿಸಿದರು. ಸುಲೋಚನ ಪ್ರಾರ್ಥಿಸಿ, ಸಂಘದ ಸಿಬ್ಬಂದಿ ಕುಮಾರಿ ಅಶ್ವಿತಾ ಎಂ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here