ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾಕೇಂದ್ರ:ಅಧ್ಯಕ್ಷರಾಗಿ ಜಯಾನಂದ ಬಂಟ್ರಿಯಾಲ್, ಕಾರ್ಯದರ್ಶಿಯಾಗಿ ಶ್ರೀಧರ ನೂಜಿನ್ನಾಯ

0

ನೆಲ್ಯಾಡಿ: ಕಟೀಲು ಮೇಳದ ಹೆಸರಾಂತ ಕಲಾವಿದ, ಯಕ್ಷಗುರು ಪ್ರಶಾಂತ ಶೆಟ್ಟಿಯವರ ನೇತೃತ್ವದ ಶಬರೀಶ ಯಕ್ಷಗಾನ ಕಲಾಕೇಂದ್ರ ನೆಲ್ಯಾಡಿ ಇದರ ನೂತನ ಪೋಷಕ ವೃಂದದ ಅಧ್ಯಕ್ಷರಾಗಿ ಜಯಾನಂದ ಬಂಟ್ರಿಯಾಲ್, ಕಾರ್ಯದರ್ಶಿಯಾಗಿ ಶ್ರೀಧರ ನೂಜಿನ್ನಾಯ, ಕೋಶಾಧಿಕಾರಿಯಾಗಿ ಗಣೇಶ ಕೆ., ಆಯ್ಕೆಯಾಗಿದ್ದಾರೆ.
ಶಬರೀಶ ಕಲಾಕೇಂದ್ರದಲ್ಲಿ ನಡೆದ ಶಬರೀಶ ಯಕ್ಷಗಾನ ಕಲಾಕೇಂದ್ರದ ಪೋಷಕರ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವ ಸಲಹೆಗಾರರಾಗಿ ಸುಧೀರ್‌ ಕುಮಾರ್ ಕೆ.ಎಸ್., ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕೆ., ಆನಂದ ಅಜಿಲ, ಜೊತೆ ಕಾರ್ಯದರ್ಶಿಯಾಗಿ ಸುಮ, ಕುಸುಮ, ಸದಸ್ಯರಾಗಿ ಗಣೇಶ ಶೆಟ್ಟಿ, ಬಾಲಕೃಷ್ಣ ಗೌಡ, ಗುಣಾಕರ, ವಿಶ್ವನಾಥ, ಜಯಂತಿ, ಶಕುಂತಳಾ ಶೆಟ್ಟಿ, ಯಶೋಧ, ಪವಿತ್ರಾಹೊಸವೊಕ್ಲು, ಶಾಲಿನಿ, ವನಿತಾ, ಲೀಲಾವತಿ, ಯಶೋದ ಎಸ್., ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here