ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ; ಗೌರವಾಧ್ಯಕ್ಷ ಬಿ.ಪುರಂದರ ಭಟ್, ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್, ಪ್ರ.ಕಾರ್ಯದರ್ಶಿ ಸುಂದರ ಸೇಡಿಯಾಪು

0

ಪುತ್ತೂರು: ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ನ್ಯಾಯವಾದಿ ಬಿ.ಪುರಂದರ ಭಟ್, ಜಿಲ್ಲಾಧ್ಯಕ್ಷರಾಗಿ ಕೆ.ಜಯರಾಮ ಕುಲಾಲ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಂದರ ಸೇಡಿಯಾಪು ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ಪುತ್ತೂರು ಅನುರಾಗ ವಠಾರದಲ್ಲಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾನೂನು ಸಲಹೆಗಾರರಾಗಿ ನೋಟರಿ ನ್ಯಾಯವಾದಿ ದೇವಾನಂದ ಕೆ, ಗೌರವ ಸಲಹೆಗಾರರಾಗಿ ಯಂ.ಶೇಷಪ್ಪ ಕುಲಾಲ್, ಗಿರೀಶ್ ನಾಯ್ಕ ಸೊರಕೆ, ಕೋಶಾಧಿಕಾರಿಯಾಗಿ ಮೋನಪ್ಪ ಕೆ, ಉಪಾಧ್ಯಕ್ಷಾಗಿ ಸಂಜೀವ, ಬಾಬು ಬೆಳ್ಳಿಪ್ಪಾಡಿ, ಜೊತೆ ಕಾರ್ಯದರ್ಶಿಗಳಾಗಿ ವೆಂಕಟೇಶ್ ಸುಣ್ಣಾಜೆ, ಸುರೇಶ್ ಸುಣ್ಣಾಜೆ, ಸಂಘಟನಾ ಕಾರ್ಯದರ್ಶಿಗಳಾಗಿ ಉಮೇಶ್, ಪ್ರಕಾಶ್ ಬಲ್ಯ, ಗುರುವಪ್ಪ, ದಿನೇಶ್ ಬೆದ್ರೋಡಿ, ಸಮಿತಿ ಸದಸ್ಯರುಗಳಾಗಿ ದಿನೇಶ್ ಆಲಂಕಾರು, ಗಣೇಶ್, ರಮೇಶ್ ಕಬಕ, ಸಂದೇಶ್, ನವೀನ್, ಯತೀಶ್, ಯಶೋಧರ, ಬಾಲಚಂದ್ರ ಕೆ, ಪುರಂದರ ನಾಯ್ಕ್, ಉದಯ ಮಾಣಿ, ರೋಹಿತ್ ಬಂಗೇರ, ಗಣೇಶ್ ಕುಂಬ್ರ, ಯಶೋಧರ ಉಪ್ಪಿನಂಗಡಿ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here