ರೆಂಜ ಬಸ್ ಪ್ರಯಾಣಿಕರ ತಂಗುದಾಣದೊಳಗೆ ಮದ್ಯ ಸೇವನೆ ಮಾಡುತ್ತಿದ್ದ ಐವರ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿರುವ ಸಾರ್ವಜನಿಕ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿರುವ ಕುರಿತ ಖಚಿತ ಮಾಹಿತಿಯಂತೆ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಅ.೨೮ರಂದು ನಡೆದಿದೆ.

ರೆಂಜದಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಕೆಲವರು ಕುಳಿತು ಮದ್ಯ ಸೇವನೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸಂಪ್ಯ ಪೊಲೀಸರು ಕಾರ್ಯಾಚರಣೆ ವೇಳೆ ಅಲ್ಲಿದ್ದ ವ್ಯಕ್ತಿಗಳು ಓಡಲು ಪ್ರಯತ್ನಿಸಿದ್ದ ವೇಳೆ ಪೊಲೀಸರು ಅವರನ್ನು ಹಿಡಿದಿದ್ದಾರೆ. ಉಪ್ಪಳಿಗೆ ರಂಗಯ್ಯನಕಟ್ಟೆ ನಿವಾಸಿ ಸುನಿಲ್(೨೨ವ), ಆರ್ಯಾಪು ಮರಿಕೆ ನಿವಾಸಿ ಭಾಸ್ಕರ(೨೨ವ), ಬೆಟ್ಟಂಪಾಡಿ ಚೆಲಿಯಡ್ಕ ನಿವಾಸಿ ಪ್ರಶಾಂತ ಸಿ.ಹೆಚ್(೨೬ವ), ಇರ್ದೆ ನಿವಾಸಿ ಧನಂಜಯ(೨೬ವ), ಉಪ್ಪಳಿಗೆ ನಿವಾಸಿ ರಂಜಿತ್ (೨೪ವ)ರವರು ಬಂಧಿತ ಆರೋಪಿಗಳು. ಅವರಿಂದ ಮದ್ಯವನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here