ಬನ್ನೂರು ಶಬನಾ ಭಾನು ನಿಧನ

0

ಪುತ್ತೂರು: ಬನ್ನೂರು ಹನಫಿ ಜಮಾಅತ್‌ಗೆ ಒಳಪಟ್ಟ ಬನ್ನೂರು ನಿವಾಸಿ ಶಬನಾರವರು(33) ಅಲ್ಪ ಕಾಲದ ಅಸೌಖ್ಯದಿಂದ ಅ.31ರಂದು ನಿಧನರಾದರು.

ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರು ಪುತ್ತೂರಿನ ವೈದ್ಯರ ಸೂಚನೆಯಂತೆ ಮಂಗಳೂರಿನ ಅತ್ತಾವರದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತಿ ಶೇಖ್ ರಫೀಕ್, ಪುತ್ರೀಯರಾದರಾಝಿನ್ ಹಾಗೂ ರಾಫಿಯಾರವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಬನ್ನೂರು ಮಸೀದಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here