ಸುದಾನ ಶಾಲೆಯಲ್ಲಿ ಕನ್ನಡದ ಸಂಭ್ರಮ

0

ಪುತ್ತೂರಿನ ಸುದಾನ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಡಾ|ರಾಜೇಶ್ ಬೆಜ್ಜಂಗಳರವರು ಕನ್ನಡಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡುತ್ತಾ ಕನ್ನಡ ನುಡಿಗೆ ಅದರದ್ದೇ ಆದ ಅಸ್ಮಿತೆಯಿದ್ದು, ಕನ್ನಡಿಗರಾದ ನಾವು ಭಾಷಾ ಶುದ್ಧತೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡುತ್ತಾ ನಮ್ಮ ನಾಡು ಮತ್ತು ನುಡಿಯ ವೈಭವಗಳ ಸುಂದರ ಚಿತ್ರಣವನ್ನು ನೀಡಿದರು.

ಮುಖ್ಯ ಶಿಕ್ಷಕಿ  ಶೋಭಾ ನಾಗರಾಜ್‌ರವರು ಕನ್ನಡ ನುಡಿಯನ್ನುರಕ್ಷಿಸುವ ನಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯಪಡಿಸಿದರು. ಉಪ ಮುಖ್ಯ ಶಿಕ್ಷಕಿ ಲವೀನ ರೋಸ್ಲಿನ್ ಹನ್ಸ್, ಸಂಯೋಜಕರಾದ  ಪ್ರತಿಮಾ, ಗಾಯತ್ರಿ, ಅಮೃತವಾಣಿ, ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಪ್ರತಿಭಾ ಎಸ್‌ರೈ ಹಾಗೂ ಶಿಕ್ಷಕ-ಶಿಕ್ಷಕೇತರರು ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳಿಗೆ ಕನ್ನಡ ಪರ ಸ್ಪರ್ಧೆಯನ್ನು ನಡೆಸಿ ಬಹುಮಾನ ನೀಡಲಾಯಿತು. ನವೆಂಬರ್ 28 ರಂದು ಕನ್ನಡರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕೋಟಿ ಕಂಠಗಾಯನದಲ್ಲಿಯೂ ಸುದಾನ ಶಾಲೆಯ ವಿದ್ಯಾರ್ಥಿಗಳು, ಆಡಳಿತ ಮಂಡಳಿ, ರೋಟರಿ ಸದಸ್ಯರು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ನೇತೃತ್ವವನ್ನು ಲಹರಿ ಸಾಹಿತ್ಯ ಸಂಘವು ವಹಿಸಿಕೊಂಡಿತ್ತು. ಸಾನವಿ ರೈ(10ನೇ) ಸ್ವಾಗತಿಸಿ ಶಾನ್ವಿ ಪಿ (8ನೇ)ದಿನದ ಮಹತ್ವವನ್ನು ವಿವರಿಸಿದರು. ಆಶ್ರಿತ್ ಕೃಷ್ಣ ರಾವ್ (5ನೇ)ಕನ್ನಡದ ಗೀತೆಯನ್ನು ಹಾಡಿ ಮನರಂಜಿಸಿದರು, ಜಿಯಾ ಸ್ವೀಡಲ್ (9ನೇ)ವಂದಿಸಿದರು, ವೃಂದಾಜೆಗೌಡ(10ನೇ)ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here