ನ.6: ಪುರಭವನದಲ್ಲಿ ಉಚಿತ ನಾಟಕ ಪ್ರದರ್ಶನ, ಸನ್ಮಾನ 

0

ಡಾ. ಹರ್ಷಕುಮಾರ್ ರೈ ಮಾಡಾವುಗೆ ರಂಗ ತೇಜಸ್ವಿ ಬಿರುದು ಪ್ರದಾನ

ಪುತ್ತೂರು: ತುಳುವೆರ ಉಡಲ್ ಜೋಡುಕಲ್ಲು ವತಿಯಿಂದ ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ನೃತ್ಯ ವೈಭವ, ಸಭಾ ಕಾರ್ಯಕ್ರಮ, ಸನ್ಮಾನ ಮತ್ತು ಉಚಿತ ನಾಟಕ ಪ್ರದರ್ಶನ ನ.6ರಂದು ಸಂಜೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಚಲನಚಿತ್ರ ನಟರು, ನಿರ್ಮಾಪಕರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತುಳುವೆರ ಉಡಲ್ ಜೋಡುಕಲ್ಲು ಕಲಾವಿದರಿಂದ ನವೀನ್ ಸಾಲ್ಯಾನ್ ಪಿತ್ರೋಡಿ ರಚಿಸಿ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ದೇಶಿಸಿರುವ ’ಮದ್ಮೆ ಒಂಜಿ ಆಂಡ್ ಗೆತ್ತ’ ತುಳು ಹಾಸ್ಯಮಯ ಸಂಸಾರಿಕ ನಾಟಕದ ಉಚಿತ ಪ್ರದರ್ಶನ ಇದೇ ಸಂದರ್ಭದಲ್ಲಿ ನಡೆಯಲಿದೆ. 

ರಂಗ ತೇಜಸ್ವಿ ಬಿರುದು ಪ್ರದಾನ

ರಂಗಭೂಮಿ, ಕಲೆ ಮತ್ತು ನಾಟಕ ತಂಡಕ್ಕೆ ಕಳೆದ ಆರು ಏಳು ವರ್ಷಗಳಿಂದ ನಿರಂತರವಾಗಿ ಸಹಕಾರ ನೀಡುತ್ತಿರುವ ಪುತ್ತೂರಿನ ಉದ್ಯಮಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಡಾ. ಹರ್ಷಕುಮಾರ್ ರೈ ಮಾಡಾವುರವರಿಗೆ ತುಳುವೆರೆ ಉಡಲ್ ಜೋಡುಕಲ್ಲು ಕಲಾತಂಡದಿಂದ ಈ ವರ್ಷದ ,’ರಂಗತೇಜಸ್ವಿ’ ಬಿರುದು ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕ ಸುರೇಶ್ ಶೆಟ್ಟಿ ಜೋಡುಕಲ್ಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here