ರಾಜ್ಯದ ಯಾವುದೇ ಭಾಗದಲ್ಲಿ ವಾಹನ ಕಳವಾದಲ್ಲಿ ಆನ್‌ಲೈನ್‌ನಲ್ಲಿ ದೂರು ದಾಖಲಿಸಿ ಎಫ್‌ಐಆರ್ ಪಡೆಯಲವಕಾಶ

0

ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ನಿಮ್ಮ ವಾಹನ ಕಳವಾಗಿದೆ ಎಂದಾದರೆ ಇನ್ನು ಮುಂದೆ ಈ ಕುರಿತು ದೂರು ದಾಖಲಿಸಲು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಅಲೆಯಬೇಕೆಂದೇನಿಲ್ಲ.ಕರ್ನಾಟಕ ಪೊಲೀಸ್ ವೆಬ್ ಸೈಟ್ಗೆ www.kp.karnataka.gov.in ಲಾಗ್ ಇನ್ ಆಗಿ ಆನ್ ಲೈನ್‌ನಲ್ಲಿ ದೂರು ಸಲ್ಲಿಸಿ ಎಫ್‌ಐಆರ್ ಪಡೆಯಬಹುದು.

ತಮ್ಮ ವಾಹನಗಳನ್ನು ಕಳೆದುಕೊಂಡಾಗ ಎಫ್‌ಐಆರ್ ಗಳ ನೋಂದಣಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು.ಸರಿಯಾಗಿ ದೂರು ಸಲ್ಲಿಸಲು ಆಗುತ್ತಿಲ್ಲ ಎನ್ನುತ್ತಿದ್ದರು.ಯಾವ ನ್ಯಾಯವ್ಯಾಪ್ತಿಗೆ ಒಳಪಡುತ್ತದೆ, ಎಲ್ಲಿ ದೂರು ದಾಖಲಿಸಬೇಕು ಎಂಬುದು ಬಹಳ ದೊಡ್ಡ ಸಮಸ್ಯೆಯಾಗಿತ್ತು. ಎಫ್‌ಐಆರ್ ದಾಖಲಿಸಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ವಾಹನ ಕಳೆದುಕೊಂಡವರು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಅಲೆಯುತ್ತಿದ್ದರು. ವಾಹನ ವಿಮೆ ಪಡೆಯಲು ಎಫ್‌ಐಆರ್ ಕಡ್ಡಾಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ವಾಹನ ಕಳೆದುಹೋಗಿದೆ ಎಂದು ಬರುವ ದೂರುಗಳಲ್ಲಿ ಶೇಕಡಾ 99ರಷ್ಟು ಪ್ರಾಮಾಣಿಕವಾಗಿದ್ದು,ಇದರಿಂದಾಗಿ ಎಫ್‌ಐಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಲಾಗಿದೆ. ಕರ್ನಾಟಕ ಪೊಲೀಸ್ ವೆಬ್ ಸೈಟ್‌ಗೆ ಲಾಗ್ ಇನ್ ಆಗಿ ಪ್ರಕ್ರಿಯೆಯನ್ನು ಅನುಸರಿಸಿ ಆನ್ ಲೈನ್‌ನಲ್ಲಿ ದೂರು ಸಲ್ಲಿಸಿ. ದೂರುದಾರರ ಡಿಜಿಟಲ್ ಸಹಿ, ಆಧಾರ್ ಸಂಖ್ಯೆಯ ದೃಢೀಕರಣ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.

ದೂರುದಾರರು ತಮ್ಮ ದೂರಿನಲ್ಲಿ ಕಳ್ಳತನದ ಸ್ಥಳವನ್ನು ನೀಡಿದ ನಂತರ ಆನ್ ಲೈನ್‌ನಲ್ಲಿ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯ ಹೆಸರನ್ನು ಕೇಳುತ್ತದೆ.ಅಂತೆಯೇ, ಕಳೆದುಹೋದ ವಾಹನದ ವಿವರಗಳನ್ನು ಅದರ ನೋಂದಣಿ ಸಂಖ್ಯೆಯಿಂದ ದೃಢೀಕರಿಸಲಾಗುತ್ತದೆ. ಡಿಜಿಟಲ್ ಸೇವೆಯನ್ನು ಪೊಲೀಸರ ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಮಾದರಿಯಲ್ಲಿ ಸಂಯೋಜಿಸಲಾಗಿದೆ. ಕಳೆದ ವಾರ ಈ ಸೇವೆಯನ್ನು ಪ್ರಾರಂಭಿಸಲಾಯಿತು ಮತ್ತು ಅಂದಿನಿಂದ, ಕರ್ನಾಟಕದಲ್ಲಿ ವಾಹನ ಕಳ್ಳತನದ ಬಗ್ಗೆ ಪೊಲೀಸರು ಸುಮಾರು 600 ಆನ್‌ಲೈನ್ ದೂರುಗಳನ್ನು ಸ್ವೀಕರಿಸಿದ್ದಾರೆ. ಡಿಜಿಟಲ್ ಸೇವೆಯನ್ನು ಪೊಲೀಸರ ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ ಮಾದರಿಯಲ್ಲಿ ಸಂಯೋಜಿಸಲಾಗಿದೆ. ಮುಂದಿನ ಹಂತವಾಗಿ, ಎಫ್‌ಐಆರ್ ನೋಂದಣಿಯ ದಿನಾಂಕದಿಂದ 91ನೇ ದಿನದಂದು ವಾಹನಗಳು ಪತ್ತೆಯಾಗದ ಜನರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ‘ಪತ್ತೆಹಚ್ಚದ’ ಅಥವಾ ಮುಚ್ಚುವಿಕೆ (‘ಸಿ’) ವರದಿಯನ್ನು ಸೇರಿಸಲಾಗುತ್ತದೆ ಎಂದು ಪ್ರವೀಣ್ ಸೂದ್ ಹೇಳಿದರು.

ಸಿಆರ್‌ಪಿಸಿ ಅಡಿಯಲ್ಲಿ, ಎಫ್‌ಐಆರ್ ದಾಖಲಾದ ದಿನಾಂಕದಿಂದ ಪ್ರಕರಣವನ್ನು ತನಿಖೆ ಮಾಡಲು ಮತ್ತು ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ 90 ದಿನಗಳನ್ನು ನೀಡಲಾಗುತ್ತದೆ. ವಾಹನ ಕಳೆದುಕೊಂಡವರಿಗೆ ವಿಮೆಯನ್ನು ಪಡೆಯಲು ‘ಪತ್ತೆಯಾಗದ’ ಅಥವಾ ’ಸಿ’ ವರದಿಯು ಅತ್ಯಗತ್ಯವಾಗಿರುತ್ತದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಸುಮಾರು 6 ಸಾವಿರದಿಂದ 7 ಸಾವಿರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗುತ್ತವೆ.ಕಳ್ಳತನಕ್ಕೆ ಒಳಗಾದವರ ಮೇಲಿನ ಹೊರೆ ಕಡಿಮೆ ಮಾಡಲು ಆನ್‌ಲೈನ್ ಎಫ್‌ಐಆರ್ ಸೇವೆಯನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here