ಸೆಂಟ್ಯಾರು ಬಸ್ ತಂಗುದಾಣದಲ್ಲಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು – ಮೃತರ ಗುರುತು ಪರಿಚಯಕ್ಕೆ ಪೊಲೀಸ್ ಮನವಿ

0

ಪುತ್ತೂರು: ಅಸ್ವಸ್ಥಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸೆಂಟ್ಯಾರು ಬಸ್ ತಂಗುದಾಣದಲ್ಲಿದ್ದ ವ್ಯಕ್ತಿ ನ.೯ ರಂದು ಮೃತಪಟ್ಟಿದ್ದಾರೆ.
ನ.೮ ರಂದು ಸುಮಾರು ೫೫ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ತೀರಾ ಅಸ್ವಸ್ಥಗೊಂಡು ಸೆಂಟ್ಯಾರು ಬಸ್ ತಂಗುದಾಣದಲ್ಲಿ ಮಲಗಿದ್ದರು. ಈ ಕುರಿತು ಅದೇ ದಾರಿಯಾಗಿ ಬರುತ್ತಿದ್ದ ಆರ್ಯಾಪು ನಿವಾಸಿ ಹರೀಶ್ ನಾಯಕ್ ಅವರು ಅಸ್ವಸ್ಥಗೊಂಡ ವ್ಯಕ್ತಿಯ ವಿಳಾಸ ಕೇಳುವ ಪ್ರಯತ್ನ ಮಾಡಿದರೂ ಆ ವ್ಯಕ್ತಿ ಯಾವುದೇ ಉತ್ತರ ನೀಡುವ ಸ್ಥಿತಿಯಲ್ಲಿಲ್ಲದ ಹಿನ್ನಲೆಯಲ್ಲಿ ತಕ್ಷಣ ೧೦೮ ಆ್ಯಂಬುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕಳುಹಿಸಿದರು. ಪುತ್ತೂರು ಆಸ್ಪತ್ರೆಯಿಂದ ಆ ವ್ಯಕ್ತಿಯನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಸಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನ.೯ ರಂದು ಮೃತಪಟ್ಟಿದ್ದಾರೆ. ಮೃತರ ಗುರುತು ಪರಿಚಯಕ್ಕಾಗಿ ಸಂಪ್ಯ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here