ದೋಳ್ಪಾಡಿ ಶಾಲೆಯಲ್ಲಿ ಒಕ್ಕಲಿಗ ಸ್ವಸಹಾಯ ಗುಂಪುಗಳ ರಚನೆ ಬಗ್ಗೆ ಸಮಾಲೋಚನಾ ಸಭೆ

0

ಪುತ್ತೂರು : ದೋಳ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಕ್ಕಲಿಗ ಸ್ವ ಸಹಾಯ ಗುಂಪುಗಳ ರಚನೆಯ ಬಗ್ಗೆ ಸಮಾಲೋಚನಾ ಸಭೆ ನಡೆಸಲಾಯಿತು.

ಪ್ರಗತಿಪರ ಕೃಷಿಕ ಶಿವಪ್ಪ ಗೌಡ ಕಟ್ಟರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಮೇಲ್ವಿಚಾರಕ ವಿಜಯ ಕುಮಾರ್ ಸ್ವಸಹಾಯ ಸಂಘದ ಬಗ್ಗೆ ಮಾಹಿತಿ ನೀಡಿದರು. ಒ.ಸ್ವ.ಸ.ಸಂಘ ಚಾರ್ವಾಕ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಒ.ಗೌ.ಸೆ.ಸಂಘ ಸವಣೂರು ವಲಯದ ಉಸ್ತುವಾರಿ ಚಂದ್ರಶೇಖರ ಗೌಡ, ಪ್ರಗತಿಪರ ಕೃಷಿಕ ಎಂ.ವಿ. ವೆಂಕಟ್ರಮಣ ಗೌಡ ಮರಕ್ಕಡ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ತಾರಾನಾಥ ಗೌಡ ಇಡ್ಯಡ್ಕ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯೆ ಅಂಬಾಕ್ಷಿ ಕೂರೇಲು, ದೋಲ್ಪಾಡಿ ಗ್ರಾಮದ ಗ್ರಾಮ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಇದ್ಯಡ್ಕ, ದೋಳ್ಪಾಡಿ ಹಾಲು ಉದ್ಪಾದಕರ ಸಹಕಾರ ಸಂಘ ಅಧ್ಯಕ್ಷ ಆನಂದ ಬನೇರಿ, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ದೇವಿಪ್ರಸಾದ್ ಗೌಡ ದೋಳ್ಪಾಡಿ, ಪ್ರಗತಿಪರ ಕೃಷಿಕ ಕೊರಗಪ್ಪ ಗೌಡ ಕೀಲೆ, ಚಾರ್ವಾಕ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿಶ್ವನಾಥ ಗೌಡ ಮರಕ್ಕಡ, ಮರಕ್ಕಡ ಶೀರಾಡಿ ಗ್ರಾಮ ದೈವಸ್ಥಾನದ ಮೊಕ್ತೇಸರ ಸೀತಾರಾಮ ಗೌಡ ಮರಕ್ಕಡರವರು ಉಪಸ್ಥಿತರಿದ್ದರು.

ಎಂ.ವಿ. ವೆಂಕಟ್ರಮಣ ಗೌಡ ಮರಕ್ಕಡ ವಂದಿಸಿದರು. ಪ್ರೇರಕ ಉದಯ ಕಾರ್ಯಕ್ರಮ ನಿರ್ವಹಿಸಿದರು. ಪ್ರೇರಕ ಉದಯ ಪ್ರಾರ್ಥಿಸಿದರು. ಅನಿತಾ ಭಗವದ್ಗೀತೆ ವಾಚಿಸಿದರು.

LEAVE A REPLY

Please enter your comment!
Please enter your name here