ಪುತ್ತೂರು : ಕಬಕ ಉಸ್ತಾದ್ರವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 32 ನೇ ವರ್ಷದ ಜಲಾಲಿಯತ್ ರಾತೀಬ್ ನ.13 ರಂದು ರಾತ್ರಿ ಮಗ್ರೀಬ್ ನಮಾಜ್ ಬಳಿಕ ಅಲ್ಹಾಜ್ ಬಿ.ಎನ್. ಮಹಮ್ಮದ್ ಮದನಿ ಕಬಕ ಉಸ್ತಾದ್ರವರ ನಿವಾಸ (ಗರೀಭ್ ನವಾಝ್) ಕೊಳ್ನಾಡು ಗ್ರಾಮದ ಬಾರೆಬೆಟ್ಟು ನೀರಪಳಿಕೆಯಲ್ಲಿ ನಡೆಯಿತು.
ಇದರ ಅಂಗವಾಗಿ ಅಸರ್ ನಮಾಜಿನ ಬಳಿಕ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಧಾರ್ಮಿಕ ಹಾಗೂ ಸಾಮಾಜಿಕ ನೇತಾರರು ಹಾಗೂ ಸಾವಿರಾರು ಜನರು ಜಲಾಲಿಯತ್ ರಾತೀಬ್ಗೆ ಆಗಮಿಸಿ ಉಸ್ತಾದರ ವಿಶೇಷ ದುವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.