ನೆಲ್ಯಾಡಿ-ರಾಮನಗರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿಯವರಿಗೆ ಸನ್ಮಾನ

0

ನೆಲ್ಯಾಡಿ: ರಾಮನಗರ ಶ್ರೀ ವಿನಾಯಕ ಭಜನಾ ಮಂಡಳಿ ಹಾಗೂ ಶ್ರೀ ರಾಮನಗರ ಫ್ರೆಂಡ್ಸ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಅವರಿಗೆ ಸನ್ಮಾನ ಕಾರ್ಯಕ್ರಮ ರಾಮನಗರ ಶ್ರೀರಾಮ ಮಂದಿರದಲ್ಲಿ ನಡೆಯಿತು.


ಅಭಿನಂದನಾ ನುಡಿಗಳನ್ನಾಡಿದ ನಡುಗುಡ್ಡೆ ಶ್ರೀ ರಾಜಂದೈವ ದೈವಸ್ಥಾನದ ಗುರಿಕ್ಕಾರ ಹಾರ್ಪಳಗುತ್ತು ರಘುನಾಥ ರೈಯವರು, ಗಂಗಾಧರ ಶೆಟ್ಟಿಯವರು ಕಳೆದ ೧೫ ವರ್ಷಗಳಿಂದ ಪ್ರಾಮಾಣಿಕ ಹಾಗೂ ನಿಸ್ವಾರ್ಥವಾಗಿ ಸಮಾಜ ಸೇವೆಯ ಮೂಲಕ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಅವರು ಮಾಡಿದ ಸೇವೆಗೆ ದೇವರು ಆಶೀರ್ವಾದ ಸಿಕ್ಕಿದೆ. ಅವರಿಗೆ ದೊರೆತ ಪುರಸ್ಕಾರ ಊರಿಗೆ ಹೆಮ್ಮೆ ತಂದಿದೆ ಎಂದರು. ಹಾರ್ಪಳ ಕುತ್ರಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ಪಡಿಪಂಡ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ ರಾಮನಗರ, ಶಾಸ್ತಾರೇಶ್ವರ ದೇವಸ್ಥಾನದ ಕೋಶಾಧಿಕಾರಿ ಸೀತಾರಾಮ ಕಾನಮನೆ, ರಾಮನಗರ-ಬಲ್ಯ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಕಾರ್ಯದರ್ಶಿ ಕಿರಣ್ ಪುತ್ತಿಲ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿದ ಗಂಗಾಧರ ಶೆಟ್ಟಿಯವರು ಮಾತನಾಡಿ, ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದರು.

ರಾಮನಗರ-ಬಲ್ಯ ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ರೈ ರಾಮನಗರ ಅಧ್ಯಕ್ಷತೆ ವಹಿಸಿದ್ದರು. ರಾಮನಗರ ಫ್ರೆಂಡ್ಸ್ ಯುವ ಸಮಿತಿ ಅಧ್ಯಕ್ಷ ಮೌನೇಶ್‌ಕುಮಾರ್ ಬಾರಿಕೆ, ವಿನಾಯಕ ಭಜನಾ ಮಂಡಳಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಹುಣ್ಸೆಬೆಟ್ಟು, ಬಲ್ಯ ಉಮಾಮಹೇಶ್ವರ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಗುತ್ತು, ಹಾರ್ಪಳ ಕುತ್ರಾಡಿ ಶ್ರೀ ಶಾಸ್ತಾರೇಶ್ವರ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ರೈ ಹಾರ್ಪಳ, ಪ್ರಗತಿಪರ ಕೃಷಿಕ ರಮೇಶ ಗೌಡ ನಾಲ್ಗುತ್ತು, ಗಿರಿಯಪ್ಪ ಗೌಡ ಹುಣ್ಸೆಬೆಟ್ಟು, ರಾಮಚಂದ್ರ ಹುಣ್ಸೆಬೆಟ್ಟು, ಜಗದೀಶ ಮಾರ್ಲ ರಾಮನಗರ, ಮೋನಪ್ಪ ರಾಮನಗರ, ಸುಶಾಂತ್ ಶೆಟ್ಟಿ ರಾಮನಗರ, ಶ್ರೀ ವಿನಾಯಕ ಭಜನಾ ಮಂಡಳಿ ಸದಸ್ಯರು, ಶ್ರೀ ರಾಮನಗರ ಫ್ರೆಂಡ್ಸ್ ಯುವ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here