ದ.ಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 13 ಮಂದಿ ಕ್ರೀಡಾಪಟುಗಳು 6 ಪ್ರಥಮ ಸ್ಥಾನಗಳೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು, ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನವಂಬರ್ ೧೫ ಮತ್ತು ೧೬ ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೭ನೇ ತರಗತಿಯ ದಿವಿಜ್ಞಾ (ಕಲ್ಲರ್ಪೆ ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿ ಪುತ್ರಿ) ೧೦೦ಮೀ ಪ್ರಥಮ, ೧೪ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ೮ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) ೪೦೦ ಮೀ ಪ್ರಥಮ, ೬೦೦ಮೀ ಪ್ರಥಮ, ೨೦೦ಮೀ ತೃತೀಯ, ೪x೧೦೦ ಮೀ ರಿಲೇ ಪ್ರಥಮ, ೮ನೇ ತರಗತಿಯ ಡಿಂಪಲ್ ಶೆಟ್ಟಿ(ಮೇರ್ಲ ಉದಯ ಶೆಟ್ಟಿ ಹಾಗೂ ಸುನೀತಾ ಶೆಟ್ಟಿ ದಂಪತಿ ಪುತ್ರಿ) ೪x೧೦೦ ಮೀ ರಿಲೇ ಪ್ರಥಮ, ೧೦೦ಮೀ ದ್ವಿತೀಯ, ೮ನೇ ತರಗತಿಯ ಅಮೃತಾ. ಬಿ.ಎ (ಶಿಕ್ಷಕ ಬನ್ನೂರು ಪಟ್ಟೆ ಅಮರನಾಥ್ ಹಾಗೂ ಶಿಕ್ಷಕಿ ಲತಾ ಕುಮಾರಿ ದಂಪತಿ ಪುತ್ರಿ) ೪x೧೦೦ಮೀ ರಿಲೇ ಪ್ರಥಮ, ೮ನೇ ತರಗತಿಯ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ ಮತ್ತು ಮಮತಾ.ಪಿ ದಂಪತಿ ಪುತ್ರಿ) ೪x೧೦೦ಮೀ ರಿಲೇ ಪ್ರಥಮ, ೧೭ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ೧೦ನೇ ತರಗತಿಯ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ ಹಾಗೂ ಜಯಲತಾ ದಂಪತಿ ಪುತ್ರಿ) ೪x೧೦೦ ಮೀ ರಿಲೇ ಪ್ರಥಮ,೧೦೦ಮೀ ತೃತೀಯ, ೧೦ನೇ ತರಗತಿಯ ಬಿ.ಲಿಖಿತಾ ರೈ (ಬಿ.ಜಗನ್ನಾಥ ರೈ ಮತ್ತು ಗೀತಾ.ಜೆ.ರೈ ದಂಪತಿ ಪುತ್ರಿ) ೪x೧೦೦ ಮೀ ರಿಲೇ ಪ್ರಥಮ, ೯ನೇ ತರಗತಿಯ ಸಾನ್ವಿ ಎಸ್.ಪಿ (ಸೇನಾ ಯೋಧ ಪಳಂಬೆ ಸುಂದರ ಪೂಜಾರಿ ಹಾಗೂ ಶಿಕ್ಷಕಿ ಭವಿತಾ ದಂಪತಿ ಪುತ್ರಿ) ೪x೧೦೦ ಮೀ ರಿಲೇ ಪ್ರಥಮ, ೯ನೇ ತರಗತಿಯ ರಿದ್ಧಿ ಶೆಟ್ಟಿ (ಚಿದಾನಂದ ಹಾಗೂ ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) ೪x೧೦೦ ಮೀ ರಿಲೇ ಪ್ರಥಮ, ೧೪ರ ವಯೋಮಾನದ ಬಾಲಕರ ವಿಭಾಗದಲ್ಲಿ ೭ನೇ ತರಗತಿಯ ಮನ್ವಿತ್ ನೆಕ್ಕರೆ (ಉಮೇಶ್ ನೆಕ್ಕರೆ ಮತ್ತು ಕವಿತಾ ನೆಕ್ಕರೆ ದಂಪತಿ ಪುತ್ರ) ೪x೧೦೦ ಮೀ ರಿಲೇ ಪ್ರಥಮ, ೮೦ ಮೀ ಹರ್ಡಲ್ಸ್ ತೃತೀಯ, ೮ನೇ ತರಗತಿಯ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನೀತಾ ದಂಪತಿ ಪುತ್ರ) ೪x೧೦೦ ಮೀ ರಿಲೇ ಪ್ರಥಮ, ೮ನೇ ತರಗತಿಯ ಮನ್ವಿತ್ ರೈ (ಮಂಜುನಾಥ್ ರೈ ಹಾಗೂ ಶಿಕ್ಷಕಿ ಪ್ರವೀಣಾ ರೈ ದಂಪತಿ ಪುತ್ರ) ೪x೧೦೦ ಮೀ ರಿಲೇ ಪ್ರಥಮ, ೮ನೇ ತರಗತಿಯ ಮನೋಹರ್ (ಪರ್ಲಡ್ಕ ಮಿಶ್ರಾ ರಾಮ್ ಹಾಗೂ ಲಕ್ಷ್ಮೀ ದಂಪತಿ ಪುತ್ರ) ೪x೧೦೦ ಮೀ ರಿಲೇ ಪ್ರಥಮ ಬಹುಮಾನ ಪಡೆದಿರುತ್ತಾರೆ. ಅದೇ ರೀತಿ ೧೪ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೃತಿ. ಕೆ ಪುತ್ತೂರು ತಾಲೂಕಿನಲ್ಲಿ ಏಕೈಕ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ. ಅಲ್ಲದೇ ೧೪ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನೂ ಕೂಡ ಗೆದ್ದುಕೊಂಡ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು ೧೩ ಮಂದಿ ಕ್ರೀಡಾಪಟುಗಳು ೬ ಪ್ರಥಮ ಸ್ಥಾನಗಳೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ಶ್ರೀ ದೀಪಕ್, ಶ್ರೀಮತಿ ರಶ್ಮಿ, ಶ್ರೀ ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here