ಶರವೂರು: ಸಂಸ್ಕಾರ ಶಿಕ್ಷಣ,ಯೋಗ ಮತ್ತು ಭಜನಾ ತರಬೇತಿ ಶಿಬಿರದ ಉದ್ಘಾಟನೆ

0

ಪುತ್ತೂರು : ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ಶರವೂರು ವತಿಯಿಂದ ಸಂಸ್ಕಾರ ಶಿಕ್ಷಣ,ಯೋಗ ಮತ್ತು ಭಜನಾ ತರಬೇತಿ ಶಿಬಿರದ ಉದ್ಘಾಟನೆಯು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಶಿಬಿರವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆಶಾ ಭಟ್,ಶೀನಪ್ಪ ಕುಂಬಾರ,ಪ್ರಶಾಂತ್ ರೈ,ಶ್ರೀ ಆದಿಶಕ್ತಿ ಭಜನಾ ಮಂಡಳಿ ಶರವೂರು ಇದರ ಅಧ್ಯಕ್ಷರಾದ ಎಂ.ಲಿಂಗಪ್ಪ ಮಡಿವಾಳ,ನಿಕಟಪೂರ್ವಾಧ್ಯಕ್ಷ ಎಂ.ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಪೂರ್ವಾಧ್ಯಕ್ಷರಾದ ಎನ್.ತಿಮ್ಮಪ್ಪ ಗೌಡ,ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಜಯಂತ್ ವೈ, ಯೋಗಗುರು ಸಂತೋಷ್,ಉಮೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದ ರು.ನವ್ಯಾ, ಯಶಸ್,ಶಿವನ್ ಪ್ರಾರ್ಥಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೀನಪ್ಪ ಕುಂಬಾರ ಸ್ವಾಗತಿಸಿ,ವಿನೋದ್ ಕೊಂಡಾಡಿಕೊಪ್ಪ ವಂದಿಸಿದರು.

LEAVE A REPLY

Please enter your comment!
Please enter your name here