ಕಾಣಿಯೂರು: ಶ್ರೀಭಕ್ತವತ್ಸಲ, ಶ್ರೀಕಾಳಭೈರವ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು : ಕಾಣಿಯೂರು ಗ್ರಾಮದ ಪುಂಚತ್ತಾರು ಶ್ರೀಹರಿ ಭಜನಾ ಮಂದಿರದಲ್ಲಿ ಶ್ರೀಭಕ್ತವತ್ಸಲ ಮತ್ತು ಶ್ರೀಕಾಳಭೈರವ ಒಕ್ಕಲಿಗ ಸ್ವಸಹಾಯ ಸಂಘ ರಚಿಸಲಾಯಿತು. ಪದ್ಮಯ್ಯ ಗೌಡ ಪಾಲೆತಡ್ಕ ಮತ್ತು ಸೀತಾರಾಮ ಗೌಡ ಬೈಲಡ್ಡೆರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೇರಕ ಉದಯ ಮತ್ತು ಗಣೇಶ್‌ರವರು ಮಾಹಿತಿ ನೀಡಿ ಸಂಘದ ಸಭಾನಡವಳಿ ಹಸ್ತಾಂತರಿಸಿದರು.


ಭಕ್ತವತ್ಸಲ ಸಂಘದ ಪ್ರಬಂಧಕರಾಗಿ ಟಿ. ನಾರಾಯಣ ಗೌಡ ಮತ್ತು ಸಂಯೋಜಕರಾಗಿ ರಾಮಣ್ಣ ಗೌಡ ಹಾಗೂ ಸದಸ್ಯರಾಗಿ ಲಕ್ಷ್ಮಣ ಗೌಡ, ತೀರ್ಥ, ದಯಾನಂದ ಗೌಡ, ತಿಮ್ಮಪ್ಪ ಗೌಡ, ಉಮೇಶ್ ಗೌಡ, ಜಯಪ್ರಕಾಶ್, ಕರುಣಾಕರ ಮತ್ತು ಶಿವರಾಮ ಗೌಡರವರು ಸೇರ್ಪಡೆಯಾದರು. ಶ್ರೀಕಾಳಭೈರವ ಸಂಘದ ಪ್ರಬಂಧಕರಾಗಿ ಶಿವಾನಂದ ಗೌಡ, ಹಾಗೂ ಸಂಯೋಜಕರಾಗಿ ದುಗಪ್ಪ ಗೌಡ ಮತ್ತು ಸದಸ್ಯರಾಗಿ ಗೋಪಾಲಕೃಷ್ಣ ಗೌಡ, ಮುರುಳಿದರ, ಪದ್ಮಯ್ಯ ಗೌಡ, ರಮೇಶ್ ಗೌಡ, ಸತೀಶ್, ಹರೀಶ್, ಪರಮೇಶ್ವರ ಗೌಡ, ಪುಟ್ಟಣ್ಣ ಗೌಡರವರು ಸೇರ್ಪಡೆಯಾದರು.

LEAVE A REPLY

Please enter your comment!
Please enter your name here