ಪಡುವನ್ನೂರು: ನೇಣು ಬಿಗಿದು ಶಶಿಧರ ಆತ್ಮಹತ್ಯೆ

0

ಪುತ್ತೂರು: ಪಡುವನ್ನೂರಿನಲ್ಲಿ ನೇಣುಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನ.23ರಂದು ನಡೆದಿದೆ. ಪಡುವನ್ನೂರು ಗ್ರಾಮದ ಮೂಡಾಯೂರು ನಿವಾಸಿ ಮೋನಪ್ಪ ನಾಯ್ಕರವರ ಪುತ್ರ ಶಶಿಧರ(39ವ.) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮದ್ಯಪಾನ ವ್ಯಸನಿಯಾಗಿದ್ದ ಇವರು ಮನೆಯ ಹತ್ತಿರದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಮಡಿದ್ದಾರೆ. ಈಶ್ವರಮಂಗಲ ಹೊರಠಾಣೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಮೃತರು ತಂದೆ ಮೋನಪ್ಪ ನಾಯ್ಕ, ತಾಯಿ, ಪತ್ನಿ ಸುನೀತಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here