ಡಾ|ನರೇಂದ್ರ ರೈ ದೇರ್ಲರವರಿಗೆ ಜಯಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರದಾನ

0

ಪುತ್ತೂರು : ಬೆಂಗಳೂರು ಅರಮನೆ ಮೈದಾನದ ಶಿಷಾ ಮಹಲ್‌ನಲ್ಲಿ ನ.೨೬ರಂದು ನಡೆದ ವಿಶ್ವ ಕನ್ನಡಿಗರ ಸಮ್ಮಿಲನ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಕೃಷಿ ಪತ್ರಿಕೋದ್ಯಮ ಪತ್ರಕರ್ತ ವಿಭಾಗದಲ್ಲಿ ಮಾಡಿದ ಸಾಧನೆಗೆ ಡಾ|ನರೇಂದ್ರ ರೈ ದೇರ್ಲರವರಿಗೆ ಜಯಕರ್ನಾಟಕ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹದಿನಾರು ಕ್ಷೇತ್ರಗಳಲ್ಲಿನ ಒಟ್ಟು ೧೬ ಮಂದಿ ಸಾಧಕರಿಗೆ ಜ್ಞಾನಪೀಠ ಪುರಸ್ಕೃತ ಡಾ| ಚಂದ್ರಶೇಖರ್ ಕಂಬಾರರವರು ಪ್ರಶಸ್ತಿ ಪ್ರದಾನ ಮಾಡಿದರು.

ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ, ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗ ರೆಡ್ಡಿ, ಮಾಗಡಿ ಕ್ಷೇತ್ರದ ಶಾಸಕ ಎ. ಮಂಜುನಾಥ್, ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್, ಸಂಘಟನೆಯ ಮುಖ್ಯ ಸಲಹೆಗಾರ ಪ್ರಕಾಶ್ ರೈ ಹಾಗೂ ಸಂಘಟನೆಯ ಮುಖ್ಯ ಪದಾಧಿಕಾರಿಗಳು, ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here