ನೆಲ್ಯಾಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗ್ರಾಹಕರೊಂದಿಗೆ ಸಂವಾದ

0

ನೆಲ್ಯಾಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಆರನೇ ನೆಲ್ಯಾಡಿ ಶಾಖೆಯು 8ನೇ ವರ್ಷಕ್ಕೆ ಪಾದಾರ್ಪಣೆಗೈದ ಸಂದರ್ಭದಲ್ಲಿ ’ಗ್ರಾಹಕರೊಂದಿಗೆ ಒಂದು ದಿನ’ ಕಾರ್ಯಕ್ರಮ ಡಿ.1ರಂದು ನಡೆಯಿತು.

ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾನಿಂಜ ಅಧ್ಯಕ್ಷತೆ ವಹಿಸಿದ್ದರು. ವಿಶೇಷಾಧಿಕಾರಿ ಮೋನಪ್ಪ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಹಿರಿಯ ಗ್ರಾಹಕ ಇಂದ್ರ ಪೂಜಾರಿ ಬದನೆ, ಚಂದ್ರಶೇಖರ ಬಾಣಜಾಲು, ಸಂಜೀವ ಪೂಜಾರಿಯವರು ಸಂಘದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಹಕರಾದ ಪ್ರಶಾಂತ್ ಬಿ, ಮೋರಿಸ್ ಡಿಸೋಜ, ಶಿವಪ್ಪ ಪೂಜಾರಿ, ವೆಂಕಪ್ಪ ಕುಂಬಾರ, ಅಬ್ದುಲ್ಲಾ ಎನ್, ರೇಷ್ಮಾ ಶಶಿ, ಆಶಾ ಲಕ್ಷ್ಮಣ್, ಸುಂದರ ಬಾಣಜಾಲು, ಮಹಾಬಲ ಪಾತಡ್ಕ, ಶ್ರೀನಿವಾಸ ಬದನೆ, ರಾಧಾಕೃಷ್ಣ ಭಟ್, ಕೆ.ಪಿ. ತೋಮಸ್ ಉಪಸ್ಥಿತರಿದ್ದರು. ಸಿಬ್ಬಂದಿಮಾನಸ ಸ್ವಾಗತಿಸಿದರು. ಕಡಬ ಶಾಖಾವ್ಯವಸ್ಥಾಪಕ ಪ್ರದೀಶ್ ಎನ್, ಸಿಬ್ಬಂದಿಗಳಾದ ಶೈಲೇಶ್ ಕುಮಾರ್, ಶಿವಪ್ರಸಾದ್, ಪಿಗ್ಮಿ ಸಂಗ್ರಾಹಕ ಸುರೇಶ್ ಕುಮಾರ್ ಸಹಕರಿಸಿದರು. ನೆಲ್ಯಾಡಿ ಶಾಖಾ ವ್ಯವಸ್ಥಾಪಕ ವಿನೋದ್ ವಂದಿಸಿದರು.

LEAVE A REPLY

Please enter your comment!
Please enter your name here