ಬಿಯಂಎಸ್ ಆಟೋ ರಿಕ್ಷಾ ಚಾಲಕರ, ಮಾಲಕರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಅವರಿಗೆ ಹಲ್ಲೆ !

0

ಪುತ್ತೂರು: ಬಿಯಂಎಸ್ ಆಟೋ ರಿಕ್ಷಾ ಚಾಲಕ, ಮಾಲಕರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ನಾಯ್ಕ್ ಅವರ ರಿಕ್ಷಾಕ್ಕೆ ವ್ಯಕ್ತಿಯೊಬ್ಬರು ಬೈಕ್ ಅಡ್ಡ ಇಟ್ಟು ಹಲ್ಲೆ ನಡೆಸಿರುವ ಘಟನೆ ಪಡ್ಡಾಯೂರಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಡಿ.4 ರಂದು ಸಂಜೆ ಭಾಸ್ಕರ್ ನಾಯ್ಕ್ ಅವರು ಪಡ್ಡಾಯೂರು ಜನತಾ ಕಾಲೋನಿಗೆ ಬಾಡಿಗೆಗೆ ಹೋಗಿ ಹಿಂದಿರುಗುವ ವೇಳೆ ಸಂತೋಷ್ ಕುಮಾರ್ ಎಂಬವರು ಬೈಕ್ ಅನ್ನು ಆಟೋ ರಿಕ್ಷಾಕ್ಕೆ ಅಡ್ಡ ಇಟ್ಟು ಹೆಲ್ಮೆಟ್ ನಲ್ಲಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಭಾಸ್ಕರ್ ನಾಯ್ಕ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here