ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ `ಸಪ್ತ ಸ್ವರ್ಣ ಸಂಭ್ರಮ’ಕ್ಕೆ ಚಾಲನೆ

0

ಸಂಸ್ಥೆಯ ಉತ್ತಮ ಸೇವೆಯಿಂದ ಗ್ರಾಹಕರಲ್ಲಿ ವಿಶ್ವಾಸಾರ್ಹತೆ ಹೆಚ್ಚಿದೆ: ವೇದಮೂರ್ತಿ ಪರಕ್ಕಜೆ ಗಣಪತಿ ಭಟ್

 ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಗೆ 75 ರೂಪಾಯಿ ಕಡಿತ
 ಆಭರಣಗಳ ಮುಂಗಡ ಆರ್ಡರ್ ನಲ್ಲಿ ಡಿಸ್ಕೌಂಟ್
 ಬೆಳ್ಳಿಯ ಆಭರಣಗಳ ಮೇಲೆ 10% ಡಿಸ್ಕೌಂಟ್
 ಬೆಳ್ಳಿಯ ಪರಿಕರಗಳ ಮೇಲೆ5% ಡಿಸ್ಕೌಂಟ್
ಬರ್ತ್ ಸ್ಟೋನ್ ಗಳ ಮೇಲೆ 10% ಡಿಸ್ಕೌಂಟ್
 ಸಪ್ತ ಅಕ್ಷಯ ಆಭರಣ ಖರೀದಿ ಯೋಜನೆ

ವಿಟ್ಲ: ಸಂಸ್ಥೆಯು ಉತ್ತಮ ರೀತಿಯ ಸೇವೆಯನ್ನು ನೀಡಿ ಜನಮೆಚ್ಚುಗೆ ಗಳಿಸಿದೆ. ಗ್ರಾಹಕರ ಮನಕ್ಕೊಪ್ಪುವ ಚಿನ್ನಾಭರಣಗಳನ್ನು ಕ್ಲಪ್ತಸಮಯಕ್ಕೆ ಒದಗಿಸುವುದರ ಮೂಲಕ ವಿಶ್ವಾಸಾರ್ಹತೆ ಹೆಚ್ಚಾಗಿದೆ ಎಂದು ವೇದಮೂರ್ತಿ ಪರಕ್ಕಜೆ ಗಣಪತಿ ಭಟ್ ಹೇಳಿದರು.
ಅವರು ವಿಟ್ಲದ ಎಂಪಾಯರ್ ಮಾಲ್‌ನಲ್ಲಿರುವ ಸಪ್ತ ಜುವೆಲ್ಸ್ ಆರನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಆಯೋಜನೆ ಮಾಡಿರುವ ‘ಸಪ್ತ ಸ್ವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕೆದಿಲ ಶ್ರೀ ಉಳ್ಳಾಕುಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷರಾದ ಜತ್ತನಕೋಡಿ ಕೃಷ್ಣ ಭಟ್, ಶಾಲಿನಿ ಕೃಷ್ಣ ಭಟ್, ಗ್ರಾಹಕರಾದ ಬರೆಂಗಾಯಿ ಕೃಷ್ಣ ಭಟ್, ಕುಳಮರ್ವ ಶಂಕರ ಭಟ್, ಕನ್ನಡಗುಳಿ ನಾರಾಯಣ ಭಟ್ ಉಪಸ್ಥಿತರಿದ್ದು ಶುಭಕೋರಿದರು.
ಸಪ್ತ ಜ್ಯುವೆಲ್ಸ್ ಪಾಲುದಾರರಾದ ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕಲಾಜೆ, ಶಿವಪ್ರಕಾಶ್ ಪಂಜಿಬಲ್ಲೆ, ದೇವಿಪ್ರಸಾದ್ ಚಂಗಲ್ಪಾಡಿ, ನಿಶಾ ಪ್ರಶಾಂತ ಸರಳಾಯ, ಕೃಷ್ಣಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ಸುಕುಮಾರ ಕಲ್ಲಮಜಲು ಹಾಗೂ ಸಿಬಂದಿಗಳಾದ ಗಣೇಶ್‌ಕಿರಣ್, ಜಯಪ್ರಕಾಶ್, ಗುರುರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ವಿಷೇಶತೆ: ಸಪ್ತ ಜ್ಯುವೆಲ್ಸ್‌ನಲ್ಲಿ ಪಿಲಿಗಿರಿ ಕೆಲಸದಲ್ಲಿ ಮುತ್ತಿನ ಹಾರ, ಗಿಳಿ ಓಲೆ ಹಾರ, ಯ್ಯಾಂಟಿಕ್ ಹಾಗೂ ಟೆಂಪಲ್ ಜ್ಯುವೆಲ್ಲರಿಯಲ್ಲಿ ವಿವಿಧ ವಿದ್ಯಾಸಗಳು, ವಿವಿಧ ವಿನ್ಯಾಸದ ಲೈಟ್ ವೈಟ್ ಆಭರಣಗಳು, ಸಾಂಪ್ರದಾಯಿಕ ಶೈಲಿಯ ಕೊತ್ತಂಬರಿ ಸರ, ಮೋಹನ ಮಾಲೆ, ಮಿಸ್ರಿ ಮಾಲೆ, ವಿವಿಧ ವಿನ್ಯಾಸದ ಕರಿಮಣಿಯಲ್ಲಿ ಮುಷ್ಟಿ ಸರ, ಕಟ್ಸ್ ಗೋಲು ಸರ, ನುಗ್ಗೆ ಸರ, ವಿವಿಧ ವಿನ್ಯಾಸದ ಗಿಡ್ಡ ಕರಿಮಣಿ ಸರ, ಲೈಟ್ ವೈಟ್ ನೆಕ್ಲೆಸ್, ಜುಮ್ಕಿ, ವಿವಿಧ ವಿನ್ಯಾಸದ ಸರ, ಬ್ರೇಸ್‌ಲೈಟ್, ಗಿಡ್ಡ ಸರ, ಉಂಗುರ, ರುದ್ರಾಕ್ಷಿ, ತುಳಸಿ, ನವರ ರತ್ನ ಸರಗಳು, ಗುಂಡಿನ ಸರ, ಬೆಳ್ಳಿಯಲ್ಲಿ ದೇವರ ಹಾಗೂ ದೈವದ ಆಭರಣ, ಸರ್ಪಾರತಿ, ಶಂಖಾರತಿ, ಕರ್ಪೂರಾರತಿ, ಕೂರ್ಮಾರತಿ, ವಿವಿಧ ವಿನ್ಯಾಸದ ಬೆಳ್ಳಿಯ ಆರ್ಟ್ ವರ್ಕ್, ಬಳೆ ಹಾಗೂ ಕಿವಿಯ ಆಭರಣ, ಬೆಳ್ಳಿಯ ಕಲಶ ಪಾತ್ರೆಗಳು, ಮದುವೆಗೆ ಅವಶ್ಯಕವಿರುವ ಪರಿಪೂರ್ಣ ಆಭರಣಗಳನ್ನು ಗ್ರಾಹಕರ ಇಚ್ಚೆಗೆ ತಕ್ಕಂತೆ ಮಾಡಿಕೊಡುವ ವ್ಯವಸ್ಥೆ ಇಲ್ಲಿದೆ.

ಸಪ್ತ ಸ್ವರ್ಣ ಸಂಭ್ರಮದ ಕೊಡುಗೆಗಳು: `ಸಪ್ತ ಸ್ವರ್ಣ ಸಂಭ್ರಮ’ದ ಪ್ರಯುಕ್ತ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸಿದಲ್ಲಿ ವಿಶೇಷ ರಿಯಾಯಿತಿಯನ್ನು ಹಾಗೂ ಕೊಡುಗೆಗಳನ್ನು ನೀಡಲಿದೆ. ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ.ಗೆ 75ರೂಪಾಯಿ ಕಡಿತ. ಆಭರಣಗಳ ಮುಂಗಡ ಆರ್ಡರ್ ನಲ್ಲಿ ವಿಶೇಷ ರಿಯಾಯಿತಿ ದೊರೆಯಲಿದೆ. ಬೆಳ್ಳಿಯ ಆಭರಣ ಮೇಲೆ 10% ಹಾಗೂ ಬೆಳ್ಳಿಯ ಪರಿಕರಗಳ ಮೇಲೆ 5% ವರೆಗೆ ರಿಯಾಯಿತಿ ದೊರೆಯಲಿದೆ. ರತ್ನದ ಹರಳು(ಬರ್ತ್ ಸ್ಟೋನ್)ಗಳ ಮೇಲೆ 10% ರಿಯಾಯಿತಿ ದೊರೆಯಲಿದೆ. ಈ ಎಲ್ಲಾ ಯೋಜನೆಗಳು ಡಿ.30ರ ವರೆಗೆ ಲಭ್ಯವಿದೆ.

`ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ:

ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು 500 ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ.

LEAVE A REPLY

Please enter your comment!
Please enter your name here