ದೇವರಗುಡ್ಡೆ ವೀರಾಂಜನೇಯಾ ಗೆಳೆಯರ ಬಳಗ ಸೇವಾ ಟ್ರಸ್ಟ್ ವತಿಯಿಂದ ಅಗ್ನಿಪಥ್ ಗೆ ನೇಮಕ ಗೊಂಡ ಭವನ್ ಕುಮಾರ್ ಅಮೈಗೆ ಸನ್ಮಾನ

0

ಕಾಣಿಯೂರು: ಶ್ರೀ ವೀರಾಂಜನೇಯಾ ಗೆಳೆಯರ ಬಳಗ ಸೇವಾ ಟ್ರಸ್ಟ್ ದೇವರಗುಡ್ಡೆ ವತಿಯಿಂದ ಅಗ್ನಿಪಥ್ ಗೆ ನೇಮಕಾತಿ ಗೊಂಡ ಭವನ್ ಕುಮಾರ್ ಅಮೈ ಅವರನ್ನು ಸನ್ಮಾನಿಸಲಾಯಿತು.

ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ್ ಸುಲಾಯ ಸನ್ಮಾನಿಸಿದರು. ಶ್ರೀ ವೀರಾಂಜನೇಯಾ ಗೆಳೆಯರ ಬಳಗ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಗೌಡ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಶ್ರೀಧರ ಗೌಡ ಕೊಯಕ್ಕುಡೆ ಉಪಸ್ಥಿತರಿದ್ದರು. ಉಮೇಶ್ ಕೆರನಾರು, ಕಿಟ್ಟಣ್ಣ ಪ್ರಭು ಚಂದ್ರಭವನ , ದಿನೇಶ್ ಕೊಯಕ್ಕುಡೆ ,ದಯಾನಂದ ಕಂಡಿಗ, ರಕ್ಷಿತ್, ಚೇತನ್ ಕೊಯಕ್ಕುಡೆ, ಮನೋಜ್ ಕೊಯಕ್ಕುಡೆ ,ವಸಂತ ಕೂಂಕ್ಯ, ಆನಂದ ಕೂಂಕ್ಯ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಪೂರ್ಣಿಮ ಹಾಗೂ ಉಮಾ ಪ್ರಾರ್ಥಿಸಿದರು.
ವೆಂಕಟೇಶ್ ಕೊಯಕ್ಕುಡೆ ಸ್ವಾಗತಿಸಿ, ನಿರ್ಮಲಾ ಕೇಶವ ಗೌಡ ಅಮೈಗುತ್ತು ವಂದಿಸಿದರು.
ಅನಿಲ್ ಕಂಡಿಗ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here