ವಿಟ್ಲ ಮುಡ್ನೂರು ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು: ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಾರು ಬೋಜಪ್ಪ ಗೌಡರವರ ಮನೆಯಲ್ಲಿ ನಂದಿನಿ ಒಕ್ಕಲಿಗ ಸ್ವ- ಸಹಾಯ ಸಂಘವನ್ನು ಹಿರಿಯರಾದ ಬೋಜಪ್ಪ ಗೌಡರವರು ಉದ್ಘಾಟನೆ ಮಾಡಿ ಸಭಾನಡಾವಳಿ ಪುಸ್ತಕವನ್ನು ಹಸ್ತಾಂತರಿಸಿದರು. ತಂಡದ ಪ್ರಬಂಧಕರಾಗಿ ಶಿಲ್ಪಾ, ಸಂಯೋಜಕರಾಗಿ ಅಕ್ಷತಾ ಸಿ.ಪಿ ಹಾಗೂ ಸದಸ್ಯರಾಗಿ ನಾರಾಯಣ, ಎ.ಎ ಪ್ರೇಮ, ವನಿತಾ ಜೆ.ಸಿ ಮತ್ತು ಎಂ.ಸೀತಮ್ಮ ಆಯ್ಕೆಯಾದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ  ಮಾಹಿತಿ ನೀಡಿದರು. ಪ್ರೇರಕರಾದ ದೇವರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here