ಅಪಘಾತದಿಂದ ಮೃತಪಟ್ಟ ಬಿಎಂಎಸ್ ಸಂಘದ ಸದಸ್ಯ ವಾಸು ಪೂಜಾರಿ ಮನೆಗೆ ಬಿಎಂಎಸ್‌ನ ಹಿರಿಯ ನಾಯಕ ವಿಶ್ವನಾಥ ಶೆಟ್ಟಿ ಭೇಟಿ

0

ಪುತ್ತೂರು: ಇತ್ತೀಚೆಗೆ ಅಪಘಾತಗೊಂಡು ಮೃತಪಟ್ಟ ಉಪ್ಪಿನಂಗಡಿ ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ರಿಕ್ಷಾ ಚಾಲಕ ವಾಸು ಪೂಜಾರಿ ಅವರ ಮನೆಗೆ ಬಿಎಂಎಸ್ ನ ಹಿರಿಯ ನಾಯಕ ವಿಶ್ವನಾಥ್ ಶೆಟ್ಟಿ ಅವರು ಡಿ.7ರಂದು ಭೇಟಿ ನೀಡಿದರು.


ಬಿಎಂಎಸ್ ದ.ಕ ಜಿಲ್ಲೆಯ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಬಿಎಂಎಸ್‌ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣ ಬೆಳಾಲು ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ, ಉಪ್ಪಿನಂಗಡಿ ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೃತ ವಾಸು ಪೂಜಾರಿಯವರ ಕುಟುಂಬಕ್ಕೆ ರೂ. 5ಲಕ್ಷ ಪರಿಹಾರ ಅಸಂಘಟಿತ ಮಂಡಳಿಯಿಂದ ಲಭಿಸಲಿದೆ. ಈ ಕುರಿತು ಮನೆಯವರಿಗೆ ಬಿಎಂಎಸ್‌ನಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here