ಪ್ರೇಮ ಬೇಕರಿ ನವೀಕರಣಗೊಂಡು ಶುಭಾರಂಭ

0

ಪುತ್ತೂರು: 1977ರಿಂದಲೇ ವ್ಯವಹಾರ ನಿರತವಾಗಿದ್ದು ಅಸಂಖ್ಯಾತ ಗ್ರಾಹಕರನ್ನು ಹೊಂದಿರುವ ದರ್ಬೆಯಲ್ಲಿರುವ ಪ್ರೇಮ ಬೇಕರಿ ಗ್ರಾಹಕರ ಅನುಕೂಲಕ್ಕಾಗಿ ನವೀಕರಣಗೊಂಡು ಹಲವು ಹೊಸತನಗಳೊಂದಿಗೆ ಶುಭಾರಂಭಗೊಂಡಿತು.

ಡಾ.ಎ.ಕೆ.ರೈ, ರೋಟರಿ ಪೂರ್ವ ಅಧ್ಯಕ್ಷ ಶರತ್ ರೈ ಮತ್ತು ಮಡಿಕೇರಿ ಗ್ರೀನ್‌ವ್ಯೂ ಎಸ್ಟೇಟ್‌ನ ಜಗದೀಶ್ ರೈಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂದನ ಸಚ್ಚಿದಾನಂದ ಪ್ರಥಮ ಖರೀದಿ ಮಾಡಿದರು. ವಾಮನ ಪೈ, ಡಾ.ಗೋಪಿನಾಥ್ ಪೈ, ಡಾ.ಗೌರಿ ಪೈ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಿವೃತ್ತ ಫಾರೆಸ್ಟರ್ ಕೃಷ್ಣಪ್ಪ, ದರ್ಬೆ ಲಕ್ಷ್ಮೀ ಕಾಂಪ್ಲೆಕ್ಸ್ ಮಾಲಕ ಭರತ್, ಅಕ್ಷಯ ಗ್ರೂಫ್‌ನ ಜಯಂತ ನಡುಬೈಲು, ಜಾಯ್ ಸಾಫ್ಟ್‌ಡ್ರಿಂಕ್ ಮಾಲಕ ದೀಪಕ್ ರೈ, ಮರೀಲ್ ರವೀಂದ್ರ ಸುಭಾಶ್ಚಂದ್ರ ಮರೀಲ್, ರವಿ ಬಾಳಿಗ, ಸತೀಶ್ ಕುಮಾರ್ ದರ್ಬೆ ಕಿರಣ್ ಪಡಿವಾಳ್, ಸಂದೀಪ್ ಬಪ್ಪಳಿಗೆ, ಆಶಾ ಜ್ಯುವೆಲ್ಲರ್‌ನ ಸಂತೋಷ್ ಕುಮಾರ್, ಸೀತಾರಾಮ ರೈ, ಕಟ್ಟಡ ಮಾಲಕ ಪ್ರಕಾಶ್ ಫೂಟ್‌ವೇರ್ ಮಾಲಕ ಸಮೀರ್, ಜಯಪ್ರಕಾಶ್ ರೈ, ಸೇರಿದಂತೆ ಹಲವರು ಶುಭಹಾರೈಸಿದರು. ಮಾಲಕರಾದ ವಿನೋದ್ ಕೆ.ಎಂ., ಮತ್ತು ಶೀಬಾ ವಿನೋದ್ ದಂಪತಿ, ಮಕ್ಕಳಾದ ಅಮೃತ, ಅದ್ವೈತ ಸ್ವಾಗತಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

Please enter your comment!
Please enter your name here