ಉಪ್ಪಿನಂಗಡಿ ಜೇಸಿಐ ಅಧ್ಯಕ್ಷರಾಗಿ ಶೇಖರ ಗೌಂಡತ್ತಿಗೆ

0

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿಯ 2023ನೇ ಸಾಲಿನ ಅಧ್ಯಕ್ಷರಾಗಿ ಶೇಖರ ಗೌಂಡತ್ತಿಗೆ ಹಾಗೂ ಕಾರ್ಯದರ್ಶಿಯಾಗಿ ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಐಪಿಪಿಯಾಗಿ ಮೋಹನಚಂದ್ರ ಪಿ.ಪಿ., ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಅವನೀಶ್ ಪಿ., ಡಾ. ಅಶೀತ್ ಎಂ.ವಿ. ಕುಶಾಲಪ್ಪ, ಡಾ. ನಿರಂಜನ್ ರೈ, ಪ್ರದೀಪ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ದಿವಾಕರ ಬಿ., ಖಜಾಂಚಿಯಾಗಿ ಮಹೇಶ್ ಕೆ., ಜೆಜೆಸಿ ಅಧ್ಯಕ್ಷರಾಗಿ ಧನ್ಯಶ್ರೀ, ಜೆಜೆಸಿ ಸಂಯೋಜಕರಾಗಿ ಪುರುಷೋತ್ತಮ ಪಿ., ಮಹಿಳಾ ಜೇಸಿ ಸಂಯೋಜಕರಾಗಿ ಲವೀನಾ ಪಿಂಟೋ, ನಿರ್ದೇಶಕರಾಗಿ ಗುಣಕರ ಅಗ್ನಾಡಿ, ಚಂದ್ರಶೇಖರ ಶೆಟ್ಟಿ, ಲೋಕೇಶ್ ಬೆತ್ತೋಡಿ, ವೀಣಾಪ್ರಸಾದ್ ಕಜೆ, ಪದ್ಮಪ್ಪ ಪೂಜಾರಿ, ಪುನೀತ್ ಎಂ., ವಿಶ್ವನಾಥ ಕುಲಾಲ್ ಕರಾಯ ಆಯ್ಕೆಯಾಗಿದ್ದಾರೆ.

ಉಪ್ಪಿನಂಗಡಿ ಜೇಸಿಐ ಘಟಕಕ್ಕೆ 44 ವರ್ಷವಾಗಿದ್ದು, 45ನೇ ವರ್ಷದ 2023ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಡಿ.15ರಂದು ರಾತ್ರಿ 7ಗಂಟೆಗೆ ಉಪ್ಪಿನಂಗಡಿಯ ರೋಟರಿ ಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ಹಾಗೂ ಗೌರವ ಅತಿಥಿಯಾಗಿ ವಲಯ 15ರ ಉಪಾಧ್ಯಕ್ಷ ದಿವಾಕರ ಕುಡ್ಪಾಜೆ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here