ಸುಳ್ಯಪದವು ಶಬರಿ ನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ವಾರ್ಷಿಕ ನೇಮೋತ್ಸವ ಪೂರ್ವಭಾವಿ ಸಭೆ

0

ಬಡಗನ್ನೂರುಃ  ಸ್ವಾಮಿ ಕೊರಗಜ್ಜ ಕ್ಷೇತ್ರ  ಶಬರಿನಗರ ಸುಳ್ಯಪದವು ಇದರ ವಾರ್ಷಿಕ ನೇಮೋತ್ಸವ ಅಂಗವಾಗಿ ಪೂರ್ವಭಾವಿ ಸಭೆಯು ದ.11ರಂದು   ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡರವರ ಅಧ್ಯಕ್ಷತೆಯಲ್ಲಿ  ಕೊರಗಜ್ಜ ಕ್ಷೇತ್ರದ ವಠಾರದಲ್ಲಿ ನಡೆಯಿತು.

ಸಭೆಯಲ್ಲಿ ಮಾರ್ಚ್ ತಿಂಗಳಲ್ಲಿ ನೆಡೆಯುವ ಶ್ರೀ ಸ್ವಾಮಿ ಕೊರಗಜ್ಜ ವಾರ್ಷಿಕ  ನೇಮೇತ್ಸವ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ತಯಾರಿ, ಮತ್ತು ಇತರ ವಿಚಾರಗಳ ಬಗ್ಗೆ ಸಭೆಯಿಂದ ಸಲಹೆ ಸೂಚನೆಗಳನ್ನು ಪೆಡೆದು  ಚರ್ಚಿಸಲಾಯಿತು.ಹಾಗೂ ಕ್ಷೇತ್ರದಲ್ಲಿ ನೂತನ ನಿರ್ಮಾಣ ಹಂತದಲ್ಲಿರುವ ಸಭಾಂಗಣ ಉದ್ಘಾಟನೆಯನ್ನು ಕೊಂಡವೂರು ಕ್ಷೇತ್ರದ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿಯವರು ಅಮಂತ್ರಿಸುವ ಬಗ್ಗೆ ತೀರ್ಮಾನಿಸಲಾಯಿತು. 
ವೇದಿಕೆಯಲ್ಲಿ ಉಪಾಧ್ಯಕ್ಷ ಸದಾನಂದ ರೈ ಬೊಳಕೂಡ್ಲು, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ, ಪ್ರಧಾನ ಅರ್ಚಕ ಮಾಧವ ಸಾಲಿಯಾನ್ ಉಪಸ್ಥಿತರಿದ್ದರು.
ಸಭೆಯಲ್ಲಿ ಕೊರಗಜ್ಜ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದ್ದರು.
ಯಕ್ಷಗಾನ ಕಲಾವಿದರು, ಉಪನ್ಯಾಸರೂ ಆದ ಚಂದ್ರಶೇಖರ ಮರದಮುಲೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here