ಶಿರಾಡಿ: ಸಿಎಸ್‌ಸಿ ಕೇಂದ್ರ ಉದ್ಘಾಟನೆ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನೆಲ್ಯಾಡಿ ವಲಯದ ವತಿಯಿಂದ ಶಿರಾಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಉದ್ಘಾಟನೆಗೊಂಡಿತು.


ನೆಲ್ಯಾಡಿ ವಲಯದ ನೂತನ ಅಧ್ಯಕ್ಷ ಕುಶಾಲಪ್ಪ ಗೌಡರವರು ಉದ್ಘಾಟಿಸಿದರು. ಕಡಬ ತಾಲೂಕಿನ ಯೋಜನಾಧಿಕಾರಿ ಮೇದಪ್ಪ ಯನ್ ಅವರು ಸೇವಾಕೆಂದ್ರದಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಶಿರಾಡಿ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಕೆ.ಆರ್, ನೆಲ್ಯಾಡಿ ವಲಯದ ಮೇಲ್ವಿಚಾರಕ ವಿಜೇಶ್ ಜೈನ್, ಕಡಬ ತಾಲೂಕಿನ ನೋಡೆಲ್ ಅಧಿಕಾರಿ ಚಿತ್ರೇಶ್, ಶಿರಾಡಿ ಮತ್ತು ಅಡ್ಡಹೊಳೆ ಒಕ್ಕೂಟದ ಪದಾಧಿಕಾರಿಗಳು, ಸಿಎಸ್‌ಸಿ ಸೆಂಟರ್‌ನ ಸಂಧ್ಯಾ ಉಪಸ್ಥಿತರಿದ್ದರು. ಶಿರಾಡಿ ಒಕ್ಕೂಟದ ಸೇವಾಪ್ರತಿನಿಧಿ ಸುಮಿತ್ರಾ ಶ್ರೀಧರ್ ನಿರೂಪಿಸಿದರು. ಶಿರಾಡಿ ಒಕ್ಕೂಟದ ಕಾರ್ಯದರ್ಶಿ ಗ್ರೇಸಿ ಚಾಕೋಚನ್ ವಂದಿಸಿದರು.

LEAVE A REPLY

Please enter your comment!
Please enter your name here